ಕೊಡಿಯಾಲಬೈಲ್ ಜಾಗ ಒತ್ತುವರಿ : ಮರುಸರ್ವೆಗೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

0

ಸುಳ್ಯ ತಾಲೂಕಿನ ಕೊಡಿಯಾಲಬೈಲ್ ನಲ್ಲಿ ಆದಿದ್ರಾವಿಡ ಸಮುದಾಯದವರ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಡಿಕೊಂಡು ಮನೆ ನಿರ್ಮಿಸಿರುವುದನ್ನು ಸಂಬಂಧಪಟ್ಟವರು ತಿಳಿಸಿದ ವಿಚಾರವಾಗಿ ಸುಳ್ಯ ತಾಲೂಕು ತಹಸೀಲ್ದಾರ್ ಅವರಿಗೆ ಜಾಗವನ್ನು ಮರು ಸರ್ವೇಗೆ ಒತ್ತಾಯಿಸಿ ಇಂದು ಯುವ ವೇದಿಕೆಯ ಕಡೆಯಿಂದ ಒತ್ತಾಯಿಸಲಾಯಿತು, ತಪ್ಪಿದಲ್ಲಿ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ದಾವೆ ಹೂಡಿ ಸಂಬಂಧ ಪಟ್ಟವರಿಗೆ ನ್ಯಾಯ ಒದಗಿಸುವುದಕ್ಕೆ ಮುಂದಾಗುತ್ತೇವೆ, ಈ ಸಂದರ್ಭದಲ್ಲಿ ಯುವ ವೇದಿಕೆಯ ಕಾನೂನು ಸಲಹೆಗರಾರು ನ್ಯಾಯವಾದಿ ಪ್ರಕಾಶ್ ಬೂಡು, ಯುವ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿಳಿಯಾರು, ತಾಲೂಕು ಸಮಿತಿ ಕಾರ್ಯದರ್ಶಿ ಶಶಿಕಾಂತ್ ಮುಳ್ಯಕಜೆ, ಹಾಗೂ ಯುವ ವೇದಿಕೆಯ ಸಂಘಟನಾ ಕಾರ್ಯಧರ್ಶಿ ರಮೇಶ್ ಬೂಡು ಉಪಸ್ಥಿತರಿದ್ದರು.