ಪ್ರೊl ರಂಗಯ್ಯ ಶೆಟ್ಟಿಗಾರ್ ರಿಂದ ಕ್ರೀಡಾಪಟುವಿನ ಕಾಲೇಜು ಶುಲ್ಕ ಭರಿಸಿ ಸಹಾಯ ಹಸ್ತ

0

ಲಯನ್ಸ್ ಕ್ಲಬ್‌ ಕುಕ್ಕೆ ಸುಬ್ರಹ್ಮಣ್ಯ ಇದರ ಪೌಂಡರ್ ಪ್ರೆಸಿಡೆಂಟ್ ಮತ್ತು ಲಯನ್ಸ್ ವಲಯ ಅಧ್ಯಕ್ಷರಾದ ಲಯನ್ ಪ್ರೊl ರಂಗಯ್ಯ ಶೆಟ್ಟಿಗಾರ್ ಅವರು ಕೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರ ಕಾಲೇಜು ಶುಲ್ಕ ಭರಿಸಿ ಸಹಾಯ ಹಸ್ತ ಚಾಚಿದರು.

ಕಾಲೇಜಿನ ಅಭಿಜಿತ್ ಇವರ ಕಾಲೇಜು ಪೀಸ್ ₹ 9,430 ರೂ.ಗಳನ್ನು ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ ಇವರಿಗೆ ಹಸ್ತಾಂತರಿಸಿದರು.

ಅಭಿಜಿತ್ ಅವರು ಕಬ್ಬಡ್ಡಿ ಪಟುವಾಗಿದ್ದು ಚತ್ತಿಸ್ ಗಡದಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕ್ರೀಡಾಪಟುವಾಗಿದ್ದಾರೆ.