ಅರಂತೋಡು ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷರಾಗಿ ಕೆ.ಎಸ್ ಇಬ್ರಾಹಿಂ ಕುಕ್ಕುಂಬಳ ಆಯ್ಕೆ

0


ದಿಕ್ರ್ ಸ್ವಲಾತ್ ಸಮಿತಿ ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ವಾರ್ಷಿಕ ಮಹಾಸಭೆಯು ಜೂ.24 ರಂದು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ದುವಾವನ್ನು ಖತೀಬರಾದ ಇಸ್ಮಾಯಿಲ್ ಫೈಝಿ ನೆರವೇರಿಸಿದರು. ಕಾರ್ಯದರ್ಶಿ ಸಂಶುದ್ಧೀನ್ ಲೆಕ್ಕ ಪತ್ರಗಳನ್ನು ಮಂಡಿಸಿದರು.


ಸಭೆಯಲ್ಲಿ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಲ್ ಹಾಜ್ ಎನ್.ಪಿ.ಎಮ್ ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕ, ಅಧ್ಯಕ್ಷರಾಗಿ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ, ಪ್ರಧಾನ ಕಾರ್ಯದರ್ಶಿಗಳಾಗಿ ಸಂಶುದ್ದೀನ್ ಕೆ.ಎ.ಯು, ಜೊತೆ ಕಾರ್ಯದರ್ಶಿಗಳಾಗಿ ಮುಜೀಬ್ ಹಾಗು ಎಸ್.ಇ ಜುಬೈರ್ ನಿರ್ದೇಶಕರುಗಳಾಗಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಜಿ.ಎಂ ಅಬ್ದುಲ್ಲ, ಹಾಜಿ ಬದುರುದ್ದೀನ್ ಪಠೇಲ್, ಟಿ.ಎಂ ಜಾವೇದ್ ತೆಕ್ಕಿಲ್, ಕೆ.ಎಂ ಮನ್ಸೂರ್ ಪಾರೆಕ್ಕಲ್ , ಹಾಜಿ ಅಝಾರುದ್ದೀನ್, ಆಶಿಕ್ ಕುಕ್ಕುಂಬಳ, ಇವರನ್ನು ಆಯ್ಕೆ ಮಾಡಲಾಯಿತು.