ಸುಬ್ರಹ್ಮಣ್ಯದ ಸಂಚಾರ ನಿಯಂತ್ರಕರಾಗಿರುವ ಪಾಲಾಕ್ಷ ಮೂರ್ತಿ ನಿವೃತ್ತಿ

0

ಕೆ.ಎಸ್.ಆರ್.ಟಿ.ಸಿ ನಿಗಮದ ಸುಬ್ರಹ್ಮಣ್ಯದಲ್ಲಿ ಸಂಚಾರ ನಿಯಂತ್ರಕರಾಗಿರುವ ಪಾಲಾಕ್ಷ ಮೂರ್ತಿ ಅವರು ಜೂ.30 ಸೇವಾ ನಿವೃತ್ತಿ ಹೊಂದಿದರು. ಇವರು 1992 ರಲ್ಲಿ ಪುತ್ತೂರು ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಆರಂಭಿಸಿದರು. 2009 – 2019 ವರೆಗೆ ಬಿ.ಸಿ ರೋಡ್ ನಲ್ಲಿ ನಿರ್ವಾಹಕರಾಗಿ ಕೆಲಸ ನಿರ್ವಹಿಸಿದರು. 2019 ರಲ್ಲಿ ಸಂಚಾರ ನಿಯಂತ್ರಕರಾಗಿ ಪದೋನ್ನತಿಗೊಂಡು ಬಿ.ಸಿ ರೋಡ್ ನಲ್ಲಿ 10 ತಿಂಗಳು ಸೇವೆ ಸಲ್ಲಿಸಿದ್ದಾರೆ. ಬಳಿಕ ಸುಳ್ಯ ಘಟಕದ ಸುಬ್ರಹ್ಮಣ್ಯದಲ್ಲಿ ಸಂಚಾರ ನಿಯಂತ್ರಕರಾಗಿ ಕರ್ತವ್ಯ ಮಾಡಿದ್ದು ಸೇವಾ ನಿವೃತ್ತಿ ಹೊಂದಿದರು. ಪಾಲಾಕ್ಷ ಮೂರ್ತಿ ಅವರು ಹಾಸನ ಜಿಲ್ಲೆಯ ಅರಸೀಕೆರೆಯ ಚಿಕ್ಕಮ್ಮನ ಹಳ್ಳಿಯವರು. ಇವರ ಪತ್ನಿ ಚೆನ್ನಬಸಮ್ಮ, ಮಗ ಮುರಳಿ ಎಸ್.ಡಿ.ಎಂ ಉಜಿರೆ ಪ್ರೌಢಶಾಲಾ ಶಿಕ್ಷಕ, ಮತ್ತೋರ್ವ ಮಗ ಸಂದೇಶ್ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿ.