ತುಂಬಿ ಹರಿಯುತ್ತಿರುವ ಪಂಜ ಹೊಳೆ

0

ಬೊಳ್ಮಲೆ -ಬಸ್ತಿಕಾಡು ಸಂಪರ್ಕ ನಿಷೇಧ


ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ ಆವರಿಸಿದ ನೆರೆ ನೀರು

ಭಾರೀ ಮಳೆಯಿಂದ ಜು.19 ರಂದು ಮುಂಜಾನೆಯಿಂದ ಪಂಜ ಹೊಳೆ ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಗೆ ಹೊಳೆಯ ನೆರೆ ನೀರು ಆವರಿಸಿದೆ. ಹೊಳೆ ಸಮೀಪದ ಕೃಷಿ ತೋಟದಲ್ಲಿ ನೆರೆ ನೀರು ನುಗ್ಗಿದೆ. ಬೊಳ್ಮಲೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆ ಗೊಂಡಿದೆ. ಪರಿಣಾಮವಾಗಿ ಕಿಂಡಿ ಅಣೆಕಟ್ಟು ಮೇಲಿರುವ ಬಸ್ತಿಕಾಡು ಪ್ರದೇಶದ ಅನೇಕ ಮನೆಗಳಿಗೆ ಸಂಪರ್ಕಿಸುವ ರಸ್ತೆ ಕಡಿತ ಗೊಂಡಿದೆ.


ಮುಂಜಾಗ್ರತಾ ಕ್ರಮವಾಗಿ ಈ ಮಧ್ಯೆ ಮಳೆಗಾಲ ಈ ರಸ್ತೆ ‌ಸಂಚಾರ ಸ್ಥಗೀತ ಗೊಳಿಸಿದರುವುದಾಗಿ ಬ್ಯಾರ್ ಗೇಡ್ ಹಾಕಿ ಬ್ಯಾನರ್ ಅಳವಡಿಸಲಾಗಿದೆ. ಇದೀಗ ನೀರಿನ ಹರಿವು ಹೆಚ್ಚಾಗಿದ್ದು ಬೊಳ್ಮಲೆಯಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನೀರು ಆವರಿಸಿದೆ.


ಸ್ಥಳಕ್ಕೆ ಗ್ರಾಮ ಪಂಚಾಯತ್ ಯವರು, ಕಂದಾಯ ಇಲಾಖೆಯವರು, ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ.
ಮುಂಜಾನೆ ಜೆಸಿಬಿ ಮೂಲಕ ಕಿಂಡಿ ಅಣೆಕಟ್ಟುನಲ್ಲಿ ಸಿಲುಕಿದ ಮರಗಳನ್ನು ತೆರವು ಕಾರ್ಯ ನಡೆಯಿತು.