ಬಡ್ಡಡ್ಕ: ಚೈತನ್ಯ ಸೇವಾಶ್ರಮದ ಸ್ವಾಮೀಜಿಯವರಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಲೇಖನಿ ವಿತರಣೆ

0

ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ದೇವರಕಳಿಯ ಚೈತನ್ಯ ಸೇವಾಶ್ರಮದ ಯೋಗೇಶ್ವರಾನಂದ ಸರಸ್ವತಿಸ್ವಾಮೀಜಿಯವರು ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಸ್ವಾಮೀಜಿಯವರ 207ನೇ ಕೃತಿಮಾಲೆ – ಆದರ್ಶ ಮಾನವನಾಗು- ಪುಸ್ತಕವನ್ನು ಅರೆಭಾಷೆ ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಸಾಯಿಗೀತಾ ಜ್ನಾನೇಶ್,ಸಂಚಾಲಕ ಡಾ.ಎನ್ ಎ ಜ್ಞಾನೇಶ್, ನಿವೃತ್ತ ಮುಖ್ಯ ಶಿಕ್ಷಕಿ ಯಶೋಧ ಗುಂಡ್ಯ ಉಪಸ್ಥಿತರಿದ್ದರು.ಮುಖ್ಯಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಸ್ವಾಗತಿಸಿ, ವಂದಿಸಿದರು.
ಶಿಕ್ಷಕಿಯರಾದ ನವ್ಯ ಎಚ್ ಎಂ, ರವಿಕಲ ನೆಲ್ಲಿಕೋಡಿ, ಸಂಧ್ಯಾ ಆಡಿಂಜ ಸಹಕರಿಸಿದರು.