ಪೊಲೀಸ್ ಅಧೀಕ್ಷಕ ಯತೀಶ್ ಎನ್. ಸುಳ್ಯ ಠಾಣೆ ಭೇಟಿ, ಪರಿಶೀಲನೆ

0

ಅಡಿಷನಲ್ ಎಸ್ ಪಿ ರಾಜೇಂದ್ರ , ಹಾಗೂ ಪುತ್ತೂರು ಡಿ ವೈ ಎಸ್ ಪಿ. ಪಿ ಅರುಣ್ ನಾಗೇ ಗೌಡ ಸಾಥ್

ಸುಳ್ಯ ಪೊಲೀಸ್ ಠಾಣೆಗೆ ಜು.24 ರಂದು ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್. ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಸುಳ್ಯ ಪ್ರಭಾರ ವೃತ ನಿರೀಕ್ಷರಾದ ಜಿ ಜೆ ಸತೀಶ್,ಸುಳ್ಯ ಠಾಣಾ ಉಪ ನಿರೀಕ್ಷಕರುಗಳಾದ ಈರಯ್ಯ ದೂಂತೂರು,ಸರಸ್ವತಿ ಹಾಗೂ ಸಿಬ್ಬಂದಿಗಳು ಠಾಣೆಯ ವತಿಯಿಂದ ಗೌರವ ವಂದನೆ ಸಲ್ಲಿಸಿದರು.

ಠಾಣೆಗೆ ಭೇಟಿ ನೀಡಿದ ಎಸ್ ಪಿ ಯವರು ಠಾಣಾ ಸ್ವಚ್ಚತೆ,ಪೊಲೀಸ್ ಕ್ವಾಟ್ರಸ್ ಕಟ್ಟಡ ಪರಿಸರ ವೀಕ್ಷಿಸಿ ಠಾಣಾ ಕಡತಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿ,ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಠಾಣಾ ಕರ್ತವ್ಯಗಳ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದರು.

ಬಳಿಕ ಸುದ್ದಿ ವರದಿಗಾರರು ಸುಳ್ಯದಲ್ಲಿ ಸಂಚಾರ ಠಾಣೆಯ ಬಗ್ಗೆ ಸಾರ್ವಜನಿಕರ ಕೋರಿಕೆ ಇರುವ ಬಗ್ಗೆ ಮತ್ತು ಕಲ್ಲುಗುಂಡಿ ಔಟ್ ಪೋಸ್ಟ್ ಶಾಶ್ವತ ಕಟ್ಟಡ ಗೊಳಿಸುವ ಮತ್ತು ಇದೀಗ ಇರುವ ಔಟ್ ಪೋಸ್ಟ್ ಕಟ್ಟಡ ಹೆಚ್ಚು ಸುರಕ್ಷಾದಾಯಕ ವಲ್ಲದ ಬಗ್ಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಂಚಾರ ಠಾಣೆ ನಿರ್ಮಾಣಕ್ಕೆ ಅದರದಾದ ನಿಬಂಧನೆಗಳು, ಕೆಲಸ ಕಾರ್ಯಗಳು ಇದ್ದು ಇದರ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ನೀಡುವುದಾಗಿ ಮತ್ತು ಕಲ್ಲುಗುಂಡಿ ಔಟ್ ಪೋಸ್ಟ್ ಕಟ್ಟಡದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಅಡಿಷನಲ್ ಎಸ್ ಪಿ ರಾಜೇಂದ್ರ ,ಪುತ್ತೂರು ಉಪ ವಿಭಾಗದ ಡಿ ವೈ ಎಸ್ ಪಿ ಅರುಣ್ ನಾಗೇ ಗೌಡ ಉಪಸ್ಥಿತರಿದ್ದರು.