ಕಾರ್ಗಿಲ್ ದಿನಾಚರಣೆ ಅಂಗವಾಗಿ ಬೆಳ್ಳಾರೆ ಲಯನ್ಸ್ ಕ್ಲಬ್ ವತಿಯಿಂದ ಸುಬೇದಾರ್ ಚಂದ್ರಶೇಖರ ಪಾಟಾಳಿಯವರಿಗೆ ಗೌರವಾರ್ಪಣೆ

0

ಕಾರ್ಗಿಲ್ ವಿಜಯೋತ್ಸವದ ದಿನವಾದ (ಜು. 26) ಇಂದು ನಿವೃತ್ತ ಯೋಧ ಸುಬೇದಾರ್ ಚಂದ್ರಶೇಖರ ಪಾಟಾಳಿಯವರಿಗೆ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ಲ. ಹೊನ್ನಪ್ಪ ಬೆಳ್ಳಾರೆಯವರ ಮನೆಯಲ್ಲಿ ನಡೆಯಿತು.


ಲಯನ್ಸ್ ಅಧ್ಯಕ್ಷ ಶ್ರೀಮತಿ ಉಷಾ ಬಿ ಭಟ್ ಪೆರುವಾಜೆ, ಪೂರ್ವಾಧ್ಯಕ್ಷ ವಿಠಲ್ ಶೆಟ್ಟಿ ಪೆರುವಾಜೆ, ಸದಸ್ಯರಾದ ವಿಠಲ್ ಶೆಟ್ಟಿ, ಕರುಣಾಕರ ಬರೆಮೇಲು, ರಕ್ಷಿತ್ ಪೆರುವಾಜೆ, ನಿವೃತ್ತ ಪ್ರೌಢಶಾಲಾ ಶಿಕ್ಷಕ ಪದ್ಮನಾಭ, ಡಾ. ಗೌತಮ್, ಶ್ರೀಮತಿ ಕಾಂತಿಕಿರಣ ಹೊನ್ನಪ್ಪ, ಚಂದ್ರಶೇಖರ ಪಾಟಾಳಿಯವರ ಪತ್ನಿ ಶ್ರೀಮತಿ ಭಾಗೀರಥಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ಕೋಶಾಧಿಕಾರಿ ಈಶ್ವರ ವಾರಣಾಶಿ ಸ್ವಾಗತಿಸಿ, ವಂದಿಸಿದರು.