ಅರಂಬೂರು ಘಟಸಮಿತಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಅಂಗವಾಗಿ ಸಂಪಾಜೆ ವಲಯದ ಅರಂಬೂರು ಘಟಸಮಿತಿ ವತಿಯಿಂದ ಅರಂಬೂರಿನ ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ-ಸಂಪಾಜೆ ವಲಯದ ಸಂಯೋಜಕಿ ಶ್ರೀಮತಿ ರೇವತಿ, ಸೇವಾದೀಕ್ಷಿತೆ ಜಯಂತಿ, ಘಟಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ,ಮೂಕಾಂಬಿಕಾ ಭಜನಾ ಮಂದಿರದ ಕಾರ್ಯದರ್ಶಿ ಪ್ರೀತಿಕ್ ಕುಲಾಲ್ ಆರಂಬೂರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.