ಆಲೆಟ್ಟಿ ಘಟ ಸಮಿತಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಒಡಿಯೂರು ಶ್ರೀಗಳ ಜನ್ಮದಿನೋತ್ಸವ,ಗ್ರಾಮೋತ್ಸವ ಅಂಗವಾಗಿ ಸಂಪಾಜೆ ವಲಯದ ಅಲೆಟ್ಟಿ ಘಟಸಮಿತಿ ವತಿಯಿಂದ ಅಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ತೀರ್ಥಕುಮಾ‌ರ್ ಕುಂಚಡ್ಕ, ಸೇವಾ ಸಮಿತಿಯ ಕಾರ್ಯದರ್ಶಿ ರಾಮಚಂದ್ರ,ಜಯಪ್ರಕಾಶ್ ಕುಂಚಡ್ಕ, ಭಜನಾ ಸಂಘದ ಕೋಶಾಧಿಕಾರಿ ಸುಂದರ, ಪಂಚಾಯತಿ ಸದಸ್ಯರಾದ ಚಂದ್ರಕಾಂತ ನಾರ್ಕೋಡು, ಆಲೆಟ್ಟಿ ಘಟಸಮಿತಿ ಅದ್ಯಕ್ಷೆ ಶ್ರೀಮತಿ ಜಾನಕಿ ಮೈಂದೂರು, ನಿಕಟಪೂರ್ವ ಅಧ್ಯಕ್ಷ ನಾರಾಯಣ ಅಲೆಟ್ಟಿ, ಕಾರ್ಯದರ್ಶಿ ಜಾನಕಿ, ಜತೆ ಕಾರ್ಯದರ್ಶಿ ಅರುಣಕುಮಾರಿ, ಉಪಾಧ್ಯಕ್ಷೆ ಕಾವೇರಿ ಗುಂಡ್ಯ, ಸಂಘಟನಾ ಕಾರ್ಯದರ್ಶಿ ರೂಪಾನಂದ ಗುಂಡ್ಯ, ಸೇವಾದೀಕ್ಷಿತೆ ಸುಂದರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.