ಮೆಸ್ಕಾಂ ಮಾಹಿತಿ : ಸಾಲ್ತಾಡಿ , ಕಂದ್ರಪ್ಪಾಡಿ, ವಾಲ್ತಾಜೆ, ಕೇವಳ , ಮಡಪ್ಪಾಡಿ, ಹಾಡಿಕಲ್ಲು ಮತ್ತು ಕಡ್ಯ ಪರಿಸರದವರಿಗೆ ಎರಡು ದಿನ ಕರೆಂಟ್ ಇಲ್ಲ

0

ಭಾರಿ ಗಾಳಿಗೆ ಗುತ್ತಿಗಾರು ಕಂದ್ರಪ್ಪಾಡಿ ಕ್ರಾಸ್ ಬಳಿ ಮಡಪ್ಪಾಡಿ ಟ್ರಂಕ್ ವಿದ್ಯುತ್ ಲ್ಯೆನಿಗೆ ಮರ ಬಿದ್ದು ಒಂಬತ್ತಕ್ಕೂ ಹೆಚ್ಚಿನ ಹೆಚ್ ಟಿ ಕಂಬಗಳು ತುಂಡಾಗಿರುವುದಾಗಿ ವರದಿಯಾಗಿದೆ.

ಆದ್ದರಿಂದ ಸಾಲ್ತಾಡಿ ,ಕಂದ್ರಪ್ಪಾಡಿ,ವಾಲ್ತಾಜೆ,ಕೇವಳ ,ಮಡಪ್ಪಾಡಿ,ಹಾಡಿಕಲ್ಲು ಮತ್ತು ಕಡ್ಯ ಪರಿಸರದ ಗ್ರಾಹಕರಿಗೆ ಎರಡು ದಿನಗಳು ವಿದ್ಯುತ್ ನಲ್ಲಿ ವ್ಯತ್ಯಯವಾಗಲಿದ್ದು .ಆದುದರಿಂದ ಆ ಭಾಗದ ಗ್ರಾಹಕರು ಸಹಕರಿಸುವಂತೆ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಂತಿಸಿದ್ದಾರೆ.