ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ದೀಪ ಕಾರ್ಯಕ್ರಮ

0

ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ, ಏಕಾಗ್ರತೆ, ಆತ್ಮ ವಿಶ್ವಾಸ ವೃದ್ಧಿ, ಪರೀಕ್ಷಾ ತಯಾರಿ ಬಗ್ಗೆ ಹಾಗೂ ಉತ್ತಮ ಗುಣ ನಡತೆ ಯ ಬಗ್ಗೆ ತರಬೇತಿಯು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜು.26 ರಂದು ನಡೆಯಿತು.


ಸ್ವಾಮಿ ವಿವೇಕಾನಂದರ ಸಂಸ್ಥೆ ಡಿವೈನ್ ಪಾರ್ಕ್ ಇದರ ಅಧಿಕಾರಿ, ವಿವೇಕ ಜಾಗ್ರತ ಬಳಗ ಸುಳ್ಯ ಇದರ ನಿರ್ದೇಶಕರು, ಹಾಗೂ ವಿದ್ಯಾರ್ಥಿ ಗಳ ರಾಜ್ಯ ಮಟ್ಟದ ತರಬೇತುದಾರರಾದ ಕೆ. ಪ್ರಕಾಶ್ ಕುಮಾರ್ ಶೆಟ್ಟಿ ಬೆಳ್ಳಾರೆ ಇವರು ಕಾರ್ಯಕ್ರಮ ನಡೆಸಿಕೊಟ್ಟರು.
ಜೇಸೀ ಸಂಸ್ಥೆ ಬೆಳ್ಳಾರೆ ಈ ಕಾರ್ಯಕ್ರಮ
ಸಂಘಟಿಸಿದರು.


ಜೇಸೀ ಸಂಸ್ಥೆಯ ಅಧ್ಯಕ್ಷ ಜಗದೀಶ್ ರೈ, ಪೆರುವಾಜೆ ಪ್ರಾಸ್ತಾವಿಕ ಮಾತು ಆಡಿ, ವಿದ್ಯಾರ್ಥಿ ಗಳ ಸರ್ವತೋಮುಖ ಬೆಳವಣಿಗೆ ಆಗಲು ತರಬೇತಿಯ ಅವಶ್ಯಕತೆ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ
ಶ್ರೀಮತಿ ಉಮಾ ಕುಮಾರಿ ಹಾಗೂ ಜೇಸೀ ಪೂರ್ವ ಅಧ್ಯಕ್ಷ ರವೀಂದ್ರ ನಾಥ ರೈ, ಅಜಪಿಲ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.