ಸಮಹಾದಿ : ಖುರ್ರತುಸ್ಸಾದಾತ್ ಕೂರ ತಂಙಲ್ ಅನುಸ್ಮರಣೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಾಗಾರ

0

ಎಸ್.ಎಂ.ಎ ಬೈತಡ್ಕ ರೀಜನಲ್ ವತಿಯಿಂದ ಮರ್ಹೂಂ ಖುರ್ರತಸ್ಸಾದಾತ್ ಕೂರ ತಂಙಲ್ ಅನುಸ್ಮರಣೆ ಹಾಗೂ ಎಸ್.ಎಂ.ಎ ಸದಸ್ಯತ್ವ ಕಾರ್ಯಾಗಾರ ಸಮಹಾದಿ ಮಸೀದಿಯಲ್ಲಿ ಜು.27 ರಂದು ಎಸ್ .ಎಂ.ಎ ಬೈತಡ್ಕ ರೀಜನಲ್ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ರಹ್ಮಾನ್ ಪೋಲಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೈತಡ್ಕ ರೇಂಜ್ ಅಧ್ಯಕ್ಷರಾದ ಲತೀಫ್ ಮುಸ್ಲಿಯಾರ್ ಕೂರತ್ ದುಆ ನೆರವೇರಿಸಿದರು.

ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಖತೀಬರಾದ ಬಹು| ರಫೀಕ್ ನಿಝಾಮಿ ಉಸ್ತಾದ್ ರು ಉದ್ಘಾಟನೆಗೈದರು.

ಎಸ್.ಎಂ.ಎ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಹು| ಅಶ್ರಫ್ ಸಖಾಫಿ ಮಾಡಾವು ವಿಷಯ ಮಂಡನೆ ಮಾಡಿ ಲೀಡರ್ಸ್ ನ ಜವಾಬ್ದಾರಿಯ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಎಸ್.ಎಂ.ಎ ಬೆಳ್ಳಾರೆ ಝೋನಲ್ ಅಧ್ಯಕ್ಷರಾದ ಇಬ್ರಾಹಿಂ ಬೀಡು, ಬೆಳ್ಳಾರೆ ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮುಸ್ಲಿಯಾರ್,ಸಮಹಾದಿ ಮಸ್ಜಿದ್ ಅಧ್ಯಕ್ಷರಾದ ಸಾದಿಕ್ ಸಮಹಾದಿ , ಬೈತಡ್ಕ ರೇಂಜ್ ಕೋಶಾಧಿಕಾರಿ ಫಾರೂಕ್ ಹಿಮಮಿ ಸಖಾಫಿ ಪುಂಚತ್ತಾರು ಸೇರಿದಂತೆ ಬೈತಡ್ಕ ರೀಜನಲ್ ವ್ಯಾಪ್ತಿಯ ಹಲವಾರು ಮಸೀದಿ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರೀಜನಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಪಳ್ಳತ್ತಾರು ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ ವಂದಿಸಿದರು