ಸಮಹಾದಿ: ಶ್ರೀ ರಾಮಾಂಜನೇಯ ಮಂದಿರ ವಠಾರದ ಪರಿಸರ ಸ್ವಚ್ಛತೆ

0


ಜೀರ್ಣೋದ್ದಾರಗೊಳ್ಳುತ್ತಿರುವ ಸಮಹಾದಿ ಶ್ರೀ ರಾಮಾಂಜನೇಯ ಮಂದಿರದ ವಠಾರ ಪರಿಸರ ಸ್ವಚ್ಛತೆ ಮಾಡಲಾಯಿತು.
ಮುರುಳ್ಯ ಒಡಿಯೂರು ಘಟ ಸಮಿತಿ ಸಭೆಯಲ್ಲಿ ಘಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗೌಡ ಪೂದೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವೇದಿಕೆ ಯಲ್ಲಿ ತಾಲೂಕ್ ಅಧ್ಯಕ್ಷ ಸುಹಾಸ್, ಉಪಾಧ್ಯಕ್ಷೆ ಶ್ರೀಮತಿ ವೀಣಾ ರೈ, ವ ಸಂಯೋಜಕಿ ವಿಜಯ ರೈ ದೋಲ್ಪಡಿ, ಸೇವಾ ದೀಕ್ಷಿತೆ ಶ್ರೀಮತಿ ಗೀತಾ ಕರುಣಾಕರ ಕಲತ್ತಜೆ ಉಪಸ್ಥಿತರಿದ್ದರು.

ಜವಾಬ್ದಾರಿ ತಂಡದ ಅಶೋಕ್ ಕುಮಾರ್ ರೈ, ಶ ಕುಮಾರ್ ಎ, ಸಚಿನ್ ಶರ್ಮಾ, ಸಂಕಪ್ಪ ಸಾಲಿಯಾನ್ ವೀಳ್ಯದೆಲೆ ನೀಡಿ ಬರಮಾಡಿ ಸ್ವಾಗತಿಸಿದರು. ಬಳಿಕ ಮಂದಿರದ ಸುತ್ತ ಮುತ್ತ ಪರಿಸರದಲ್ಲಿ ಕಸ- ಕಡ್ಡಿಹೆಕ್ಕಿ ತೆರವುಗೊಳಿಸಿ ಒಡಿಯೂರು ಗ್ರಾಮಸ್ಥವಾದದ ಬಗ್ಗೆ ಸ್ವಚ್ಛತೆಯ ಮೂಲಕ ಶ್ರಮದಾನ, ಮಂದಿರ ಸುತ್ತಲು ತುಳಸಿ ಗಿಡ ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಂದಿರದ ಸಂಚಾಲಕ ವಸಂತ ನಡುಬೈಲು, ಜೀರ್ಣೋದ್ದಾರ ಸಮಿತಿಯ ಧೀರಜ್, ರೋಹಿತಶ್ವ ಹೆದ್ದಾರಿ, ಅಶೋಕ್ ಕುಮಾರ್ ರೈ ಯು, ಸಚಿನ್ ಶರ್ಮಾ, ಶರತ್ ಕುಮಾರ್ ಹಾಗೂ ಘಟ ಸಮಿತಿ ಸದಸ್ಯರು, ಪದಾಧಿಕಾರಿಗಳು, ವಲಯ ಸಂಯೋಜಕಿ ಶ್ರೀ ಮತಿ ವಿಜಯ ದೊಳ್ಪಾಡಿ, ಸೇವಾ ದೀಕ್ಷಿತ ಗೀತಾ ಕರುಣಾಕರ ಕಳತ್ತಜೆ ಭಾಗವಹಿಸಿದ್ದರು.