ಸುಳ್ಯ ಟಿ ಎ ಪಿ ಸಿ ಎಂ ಎಸ್ ಸಹಕಾರಿ ಸಂಘದ ನೂತನ ಸದಸ್ಯರ ತಂಡದಿಂದ ಸ್ಪೀಕರ್ ಯು ಟಿ ಖಾದರ್ ರವರ ಭೇಟಿ

0

ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್ ಸಹಕಾರಿ ಸಂಸ್ಥೆಗೆ ನೂತನವಾಗಿ ಅವಿರೋದವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ವ್ಯವಸ್ಥಾಪಕರು ಬೆಂಗಳೂರಿನ ವಿಧಾನ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಧಾನ ಸಭೆಯ ಸಭಾಪತಿಗಳಾದ ಯು.ಟಿ ಖಾದರ್ ಫರೀದ್ ರವರನ್ನು ಸೌಹಾರ್ಧ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಈ ಸಂಧರ್ಭದಲ್ಲಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಪಾಧ್ಯಕ್ಷ ಪಿ ಎಸ್ ಗಂಗಾಧರ್, ಪದಾಧಿಕಾರಿಗಳಾದ ಪಿ ಸಿ ಜಯರಾಮ್,ಸದಸ್ಯ ಎಸ್ ಸಂಶುದ್ದೀನ್ ಅರಂಬೂರು, ಕಾರ್ಯ ನಿರ್ವಾಹಣಾರಧಿಕಾರಿ ಜಯರಾಮ ದೇರಪ್ಪಜ್ಜನ ಮನೆ ಮೊದಲಾದವರು ಉಪಸ್ಥಿತರಿದ್ದರು.