ಬಿದ್ದು ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಾರಾಯಣ ಗೌಡ ಕಜೆಮೂಲೆ ಮತ್ತು ಯಾಹಿಯಾ ಉಮ್ಮಿಕಳ

0

ಕಳಂಜ ಗ್ರಾಮದ ಕಜೆಮೂಲೆ ನಾರಾಯಣ ಗೌಡ ಮತ್ತು ಯಾಹಿಯಾ ಉಮ್ಮಿಕಳ ಎಂಬವರು ತಮಗೆ ಬಿದ್ದು ಸಿಕ್ಕಿದ ಹಣವನ್ನು ವಾರಸುದಾರರನ್ನು ಪತ್ತೆ ಹಚ್ಚಿ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಘಟನೆ ಆ. 2ರಂದು ಬೆಳ್ಳಾರೆಯಲ್ಲಿ ನಡೆದಿದೆ.

ಬೆಳ್ಳಾರೆಯ ಇಂದಿರಾ ನಗರದ ಹೃತ್ವಿಕ್ ಎಂಬವರು ತಮ್ಮ ದ್ವಿಚಕ್ರ ವಾಹನವನ್ನು ಮಾರಾಟಮಾಡಿ ಅದರರಿಂದ ಬಂದ ಹಣವನ್ನು ಹಿಡಿದುಕೊಂಡು ಬೆಳ್ಳಾರೆ ಮೇಲಿನ ಪೇಟೆಯ ಅಮ್ಮು ರೈ ಕಾಂಪ್ಲೆಕ್ಸ್ ಬಳಿ ಹೋಗುತ್ತಿರುವಾಗ ಅದರಲ್ಲಿ ರೂ. 8610/- ನ್ನು ಕಳೆದುಕೊಂಡ ಘಟನೆ ಜು. 27ರಂದು ನಡೆಯಿತು. ಹೃತ್ವಿಕ್ ರವರು ಕಳೆದುಕೊಂಡ ಹಣ
ನಾರಾಯಣ ಗೌಡ ಕಜೆಮೂಲೆ ಮತ್ತು ಯಾಹಿಯಾ ಉಮ್ಮಿಕಳರವರಿಗೆ ಬಿದ್ದು ಸಿಕ್ಕಿತು. ಅವರು ಅದರ ವಾರಸುದಾರರು ಯಾರೆಂದು ಪತ್ತೆಹಚ್ಚಿ ಆ. 2ರಂದು ಬೆಳ್ಳಾರೆ ಪೊಲೀಸ್ ಠಾಣೆಗೆ ಕರೆಸಿ ಪೊಲೀಸ್ ಅಧಿಕಾರಿಯವರ ಮೂಲಕ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.