ಪಂಜ : ಸ್ವಸಹಾಯ ಸಂಘದ ರಜತ ಮಹೋತ್ಸವ ಪ್ರಯುಕ್ತ ಅಯೋಧ್ಯ , ಕಾಶಿ ಕ್ಷೇತ್ರ ದರ್ಶನ

0

ಪಂಜದ ಮಹಾತ್ಮ ಗಾಂಧಿ ವಿದ್ಯಾಪೀಠ ಇದರ ಮಾರ್ಗದರ್ಶನದಲ್ಲಿ ಆರಂಭ ಗೊಂಡ ಶ್ರೀ ಅಮೃತೇಶ್ವರಿ ಸ್ವಸಹಾಯ ಸಂಘ ಅಳ್ಪೆ ಇದರ ರಜತ ಮಹೋತ್ಸವ ಪ್ರಯುಕ್ತ ಸಂಘದ ಆರು ಜನ ಸದಸ್ಯರು ಅಯೋಧ್ಯ ಶ್ರೀ ರಾಮ ದೇವರ ದರ್ಶನ , ಕಾಶಿ ವಿಶ್ವನಾಥ ದೇವರ ದರ್ಶನ ಪಡೆದು ರಜತ ಮಹೋತ್ಸವ ಕಾರ್ಯಕ್ರಮವನ್ನು ಅಲ್ಲೇ ಆಯೋಜಿಸುತ್ತಾರೆ.

ಆ. 2ರಂದು ಆರಂಭಗೊಂಡು ಆ. 10ರ ತನಕ ತೀರ್ಥಯಾತ್ರೆ ನಡೆಯಲಿದೆ .
ಸಂಘದ ಅಧ್ಯಕ್ಷ ಬೊಮ್ಮಣ್ಣ ಗೌಡ ಕರಿಮಜಲು, ಕಾರ್ಯದರ್ಶಿ ಧರ್ಮಪಾಲ ಗೌಡ ಕೋಟ್ಯಯಡ್ಕ, ಸದಸ್ಯರಾದ ಜಿನ್ನಪ್ಪ ಅಳ್ಪೆ, ರತನ್ ಕುಮಾರ್ ಶೇಡಿಗುಂಡಿ, ಭುವನೇಂದ್ರ ಕರಿಮಜಲು , ನೇಮಿರಾಜ ಕೋಟ್ಯಯಡ್ಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.