ನಿವೃತ್ತ ಸುಬೇದಾರ್ ಪುಟ್ಟಣ್ಣ ಗೌಡ ಕಂಟ್ರಮಜಲುರವರಿಗೆ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ

0

ನಾಲ್ಕೂರು ಗ್ರಾಮದ ಕಂಟ್ರಮಜಲು ನಿವೃತ್ತ ಸುಬೇದಾರ್ ಪುಟ್ಟಣ್ಣ ಗೌಡ ಕೆ.ಎಸ್.ರವರು ಅಸೌಖ್ಯದಿಂದ ಜು.೨೩ ರಂದು ನಿಧನರಾಗಿದ್ದು ಇವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ
ಆ.3ರಂದು ನಡೆಯಿತು.

ಮೃತರ ಬಗ್ಗೆ ಕೆ.ಎಸ್. ವೆಂಕಟ್ರಮಣ ಅಧ್ಯಕ್ಷರು ಕೊಂರ್ಬಡ್ಕ- ದೊಡ್ಡಮನೆ ಕುಟುಂಬ ದೇವರು ದೈವಗಳ ಸೇವಾ ಟ್ರಸ್ಟ್ (ರಿ) ಮಾತನಾಡಿದರು.

ಹಾಗೂ ಮಣಿ ಮುಂಡೋಡಿಯವರು ಮಾತನಾಡಿ ಯೋಧನಾಗಿ ದೇಶಕ್ಕೆ ಕೊಟ್ಟ ಕೊಡುಗೆ ಹಾಗೂ ನಿವೃತ್ತಿಯ ಬಳಿಕ ಸಮಾಜದಲ್ಲಿ ಇವರ ಬಾಂಧವ್ಯದ ಕುರಿತು ಮಾತನಾಡಿದರು.

ಮೃತರ ಪುತ್ರ ಅಜಿತ್ ಕೆ.ಪಿ. ಹಾಗೂ ಪುತ್ರಿ ಶ್ರೀಮತಿ ಅಶ್ವಿನಿ ಕೆ.ಪಿ. , ಅಳಿಯ ಪ್ರದೀಪ್ ಉಳುವಾರು , ಮೊಮ್ಮಗಳು, ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ನೆಂಟರಿಷ್ಟರು, ಕುಟುಂಬಸ್ಥರು ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಹೂ ಹಾಕಿ ಶ್ರದ್ಧಾಂಜಲಿ ಅರ್ಪಿಸಿದರು.