ಅಡ್ಕಾರು :ಅಂಜನಾದ್ರಿ ಕ್ಷೇತ್ರದಲ್ಲಿ ಆಟಿ ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಆಟಿ ಅಮವಾಸ್ಯೆ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಯು ಆ.4ರಂದು ನಡೆಯಿತು.

ಆಟಿ ಅಮವಾಸ್ಯೆ ಪ್ರಯುಕ್ತ ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ದೇವರಿಗೆ ಮಹಾಪೂಜೆ, ಭಕ್ತಾದಿಗಳಿಗೆ
ಕಲಶ ಸ್ನಾನ, ಸಾವಿರದೊಂದು ಔಷಧೀಯ ಗುಣಗಳನ್ನು ಹೊಂದಿರುವ ಪಾಲೆ ಕಷಾಯ ವಿತರಣೆ ನಡೆಯಿತು.

ಬಳಿಕ ಶ್ರೀ ಪ್ರಸನ್ನಾಂಜನೇಯ ಸ್ವಾಮಿಯ ಸನ್ನಿಧಿಯ ಆವರಣದಲ್ಲಿ ವೃಕ್ಷಾರೋಹಣ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶಿವರಾಮ ರೈ ಕುರಿಯ, ಸಮಿತಿಯ ಪದಾಧಿಕಾರಿಗಳಾದ ವಿವೇಕ್ ರೈ ಡಿಂಬ್ರಿಗುತ್ತು, ಜಯಂತ ಗೌಡ ಅಡ್ಕಾರು, ರವಿಪ್ರಸಾದ್ ನಾಯಕ್ ಕಜೆಗದ್ದೆ, ಸತೀಶ್ ಪೂಜಾರಿ ಅಡ್ಕಾರು, ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಶ್ರೀಮತಿ ಪ್ರೇಮ ಜಯಂತ ಗೌಡ ಅಡ್ಕಾರು, ಜಯರಾಮ ಅಡ್ಕಾರು, ಜಯರಾಮ ರೈ ಜಾಲ್ಸೂರು, ನಾರಾಯಣ ಕಜೆಗದ್ದೆ, ಸುನಿಲ್ ಅಡ್ಕಾರು, ಗಿರಿಧರ ಗೌಡ ವಿನೋಬನಗರ, ಗಣೇಶ್ ಅಂಬಾಡಿಮೂಲೆ, ನವೀನ್ ಕುಮಾರ್ ಅಡ್ಕಾರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.