ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕಿ ಕುಸುಮಾವತಿ ಅಸೌಖ್ಯದಿಂದ ನಿಧನ

0

ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕಿಯಾಗಿದ್ದ ನೆಲ್ಲೂರು ಕೆಮ್ರಾಜೆ ಗ್ರಾಮದ ಚಾಕೋಟೆಮೂಲೆ ಗೋಪಾಲಕೃಷ್ಣ ಎಂಬವರ ಪತ್ನಿ ಕುಸುಮಾವತಿ ಎಂಬವರು ಅಸೌಖ್ಯದಿಂದ ಕಳೆದ ರಾತ್ರಿ ನಿಧನರಾದರು. ‌

ಅವರಿಗೆ ಸುಮಾರು 39 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಅತ್ತೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಕುಸುಮಾವತಿ ಯವರು ಕಳೆದ ಕೆಲ ತಿಂಗಳಿನಿಂದ ಕಿಡ್ನಿ ಸಮಸ್ಯೆಗೆ ಒಳಗಾಗಿ ಡಯಾಲಿಸ್ ಮಾಡಿಸುತ್ತಿದ್ದರು. ನಿನ್ನೆ ರಾತ್ರಿ ಸುಮಾರು 12ರ ಮಧ್ಯರಾತ್ರಿ ಉಸಿರಾಟದ ತೊಂದರೆಗೊಳಗಾದರು. ತಕ್ಷಣ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಅದಾಗಲೇ ಅವರು ಕೊನೆಯುಸಿರೆಳೆದಿದ್ದರು‌ ಎಂದು‌ ತಿಳಿದು ಬಂದದೆ.