ಯಾದವ ಸಭಾ ಪ್ರಾದೇಶಿಕ ಸಭೆ ಮಂಡೆಕೋಲು ಇದರ ವಾರ್ಷಿಕ ಮಹಾಸಭೆ

0


ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಇದರ ವಾರ್ಷಿಕ ಮಹಾಸಭೆಯು ಯಾದವ ಸಮುದಾಯ ಭವನ ಮಂಡೆಕೋಲಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿಯವರು ವಹಿಸಿದರು. ಸಭೆಯಲ್ಲಿ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ, ಅಷ್ಟಮಿ ಕಾರ್ಯಕ್ರಮ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ವರದಿ ವಾಚನ,ಲೆಕ್ಕಪತ್ರ ಮಂಡನೆಯನ್ನು ಶಾರದಾ ರಾಧಾಕೃಷ್ಣ ಕನ್ಯಾನ ವಾಚಿಸಿದರು. ವೇದಿಕೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ, ಕಾರ್ಯದರ್ಶಿ ಕೃಷ್ಣ ಬೆಟ್ಟ, ತಾಲೂಕು ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ ಶಾರದಾ ರಾಮನ್, ತಾಲೂಕು ಯಾದವ ಸಭಾ ಉಪಾಧ್ಯಕ್ಷ ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ಯಾದವ ಸಭಾ ಮಂಡೆಕೋಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಮಾಸ್ತರ್ ಕೇನಾಜೆ, ಯಾದವ ಸಭಾ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಪ್ರಕಾಶ್ ಕಣೆಮರಡ್ಕ ವೇದಿಕೆಯಲ್ಲಿದ್ದರು. ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಇದರ ಮಾಜಿ ಕಾರ್ಯದರ್ಶಿ ರಾಮಚಂದ್ರ ಯದುಗಿರಿ ಕಾರ್ಯಕ್ರಮ ನಿರೂಪಿಸಿದರು. ಮುಂದೆ ಯಾದವ ಸಮುದಾಯದ ಉದ್ಘಾಟನೆಯನ್ನು ನಡೆಸುವ ಬಗ್ಗೆ ಸುರೇಶ್ ಕಣೆಮರಡ್ಕ ಅವರು ಸಭೆಗೆ ತಿಳಿಸಿದರು, ಪ್ರಕಾಶ್ ಕಣೆಮರಡ್ಕ ವಂದನಾರ್ಪಣೆಗೈದರು.