ಸುದ್ದಿ ವರದಿ ಇಂಪ್ಯಾಕ್ಟ್

0

ಸುಳ್ಯ ಸ.ಮಾದರಿ ಶಾಲಾ ಮುಂಭಾಗ ಬರೆಯಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರ : ಮೆಸ್ಕಾಂ ಕಾರ್ಯಕ್ಕೆ ಪ್ರಶಂಸೆ

ಸುಳ್ಯ ಸರಕಾರಿ ಮಾದರಿ ಶಾಲೆಯ ಮುಂಭಾಗದಲ್ಲಿ ಜ್ಯೋತಿ ಸರ್ಕಲ್ ಮುಖ್ಯ ರಸ್ತೆ ರಿಕ್ಷಾ ನಿಲ್ದಾಣದ ಬಳಿ ಬರೆಯಲ್ಲಿ ವಿದ್ಯುತ್ ಕಂಬವೊಂದು ರಸ್ತೆಗೆ ವಾಲಿದಂತಿದ್ದು ಅಪಾಯದ ಸ್ಥಿತಿಯಲ್ಲಿತ್ತು.
ಸುರಿಯುತ್ತಿರುವ ಭಾರೀ ಮಳೆಗೆ ಬರೆಯ ಮಣ್ಣು ಜರಿದು ಬರೆ ಕುಸಿದು ಬಿದ್ದರೆ ವಿದ್ಯುತ್ ಕಂಬ ಕೂಡ ಬೀಳುವ ಆತಂಕ ಎದುರಾಗಿತ್ತು.

ಈ ಪರಿಸರದಲ್ಲಿ ಮೂರು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಓಡಾಡುವ ಪ್ರದೇಶವಾಗಿದ್ದು
ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ ಮೇರೆಗೆ ಸುದ್ದಿ ವೆಬ್ ಸೈಟ್ ನಲ್ಲಿ ಸವಿವರ ವರದಿ ಪ್ರಕಟವಾಗಿತ್ತು.
ಈ ಹಿನ್ನೆಲೆಯಲ್ಲಿ ಆ.7 ರಂದು ವಾಲಿದ ವಿದ್ಯುತ್ ಕಂಬವನ್ನು ಬದಲಿಸಿ ಹೊಸ ಕಂಬವನ್ನು ರಸ್ತೆಯ ಬದಿಯಲ್ಲಿ ಹಾಕುವ ಮೂಲಕ ‌ಸಮಸ್ಯೆಗೆ ಪರಿಹಾರ ದೊರಕಿದೆ. ಮೆಸ್ಕಾಂ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.