ಕುಂಭಕ್ಕೋಡು ಶಶಿಕಲಾ ಶುಭಕರ ರಾವ್ ಮನೆಯ ಸಮೀಪದಲ್ಲಿರುವ ನಾಗನಕಟ್ಟೆಯಲ್ಲಿ ನಾಗರಪಂಚಮಿ ಆಚರಣೆ

0

ನಾಗರಪಂಚಮಿ ದಿನವಾದ ಆ.09 ರಂದು ಒಡಬಾಯಿ ಬೆಟ್ಟಂಪ್ಪಾಡಿ ರಸ್ತೆ ಕುಂಭಕ್ಕೊಡು ಶಶಿಕಲಾ ಶುಭಕರ ರಾವ್ ರವರ ಮನೆಯ ಸಮೀಪದಲ್ಲಿರುವ ಸಾರ್ವಜನಿಕ ನಾಗನಕಟ್ಟೆಯ ಶ್ರೀ ನಾಗದೇವರಿಗೆ ನಾಗರ ಪಂಚಮಿ ದಿನದಂದು ಹಾಲು,ಸಿಯಾಳಾಭಿಷೇಕ ಪೂಜೆ ಕಾರ್ಯಕ್ರಮವು ಧರ್ಮಾರಣ್ಯದ ವೆಂಕಟೇಶ ಶಾಸ್ತ್ರೀ ಪೌರೋಹಿತ್ಯದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಕುಂಭಕ್ಕೊಡು ಶಶಿಕಲಾ ಅಚ್ಚುತ ಭಟ್ ಕಲಾಮಂದಿರ ಮಾಲಕಿ ಶಶಿಕಲಾ ಶುಭಕರ ರಾವ್,ರಾಜೇಶ್ ನಾಯಕ್ ಪುತ್ತೂರು, ದೇವಿಪ್ರಸಾದ್ ಇಂಜಿನಿಯರ್, ಹಾಗೂ ಕುಂಭಕ್ಕೊಡು ಕಟ್ಟಡದ ಉದ್ಯಮಿಗಳು, ಮಾಂಡೋವಿ ಮೋಟಾರ್,ಹುಂಡೈ ಶೋರೂಂ,ಟಿ ವಿ ಎಸ್ ಶೊರೂಂ ಮಾಲಕರು ಸಿಬ್ಬಂದಿಗಳು,ಸೇರಿ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದು.
ನಾಗದೇವರಿಗೆ ಹಾಲು ,ಸಿಯಾಳ ಸಮರ್ಪಿಸಿದರು.