ಗಾಂಧಿನಗರ ಕೆಪಿಎಸ್ : ನಶಾ ಮುಕ್ತ ಪ್ರತಿಜ್ಞೆ ಸ್ವೀಕಾರ

0

ಕರ್ನಾಟಕ ರಾಜ್ಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆ ವತಿಯಿಂದ ರಾಜ್ಯದ ಎಲ್ಲ ಶಾಲೆ ಗಳಲ್ಲಿ ನಶಾ ಮುಕ್ತ ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂಬ ಆದೇಶದಂತೆ ಇಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧೀನಗರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಮುದಾಯದದ ಎಲ್ಲ ವರ್ಗದ ಜನರಿಗೆ ಮಾದಕ ವ್ಯಸನ ಮಾಡದಂತೆ ನಶಾ ಮುಕ್ತ ಎಂಬ ಪ್ರತಿಜ್ಞೆ ಯನ್ನು ಮಾಡಲಾಯಿತು.

ಈ ವೇಳೆ ವಿಕಲಚೇತನರ ಇಲಾಖೆಯ ನಗರ ಪಂಚಾಯತ್ ನ ಮೇಲ್ವಿಚಾರಕರಾದ ಪ್ರವೀಣ್ ನಾಯಕ್, ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ, ಚಿನ್ನಪ್ಪ ಮಾಸ್ಟರ್, ಪದ್ಮಿನಿ, ಯಶ್ವಿನಿ ಮತ್ತು ಇತರ ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಳು ಭಾಗವಹಿಸಿದ್ದರು.