ನೆಲ್ಲೂರು ಕೆಮ್ರಾಜೆ : ನಿತ್ಯಾನಂದ ಹೊಸೋಳಿಕೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಜಬಳೆ ಹೊಸೋಳಿಕೆ ನಿತ್ಯಾನಂದ ಎಂಬವರು ನಿನ್ನೆ(ಆ.11) ಬೆಳಿಗ್ಗೆ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.

ನಿತ್ಯಾನಂದರವರು ಮೂಲತಃ ಗುತ್ತಿಗಾರಿನ ಹೊಸೊಳಿಕೆಯವರಾಗಿದ್ದು, ಕಳೆದ 15 ವರ್ಷಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಜಬಳೆಯಲ್ಲಿ ನೆಲೆಸಿದ್ದರು. ರಿಂಗ್ ಕೆಲಸ ಮಾಡುತ್ತಿದ್ದ ಇವರು ರಿಂಗ್ ನಿತ್ಯಾಣ್ಣ ಎಂದೇ ಹೆಸರಾಗಿದ್ದರು.‌

ಮೃತರು ಪತ್ನಿ ಹೇಮಾ ಎನ್. ನಂದ, ಪುತ್ರಿಯರಾದ ಕೆವಿಜಿ ಇಂಜಿನಿಯರಿಂಗ್ ವಿದ್ಯಾರ್ಥಿ ನೇಹ ಮತ್ತು ಇನ್ನೋರ್ವ ಪುತ್ರಿ ಹನಿ ಹಾಗೂ ಸಹೋದರಿ ಚಂದ್ರಾವತಿ ಪೆರಾಜೆ ಯವರನ್ನು ಅಗಲಿದ್ದಾರೆ.