ಇಂದು ಅರಂತೋಡಿನಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ

0

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ, ಅರಂತೋಡು ಹನುಮಾನ್ ಶಾಖೆಯ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯು ಅರಂತೋಡಿನಲ್ಲಿ ಇಂದು ಸಂಜೆ ನಡೆಯಲಿದೆ.

ಸಂಜೆ ಆರು ಗಂಟೆಗೆ ಅರಂತೋಡಿನ ಹಳೆಯ ಮೆಸ್ಕಾಂ ಕಛೇರಿ ಬಳಿಯಿಂದ ಹೊರಡಲಿರುವ ಬೃಹತ್ ಪಂಜಿನ ಮೆರವಣಿಗೆಯು ತೊಡಿಕಾನ ವೃತ್ತದ ಬಳಿಯಾಗಿ ಶ್ರೀ ದುರ್ಗಾಮಾತಾ ಭಜನಾ ಮಂದಿರದವರೆಗೆ ಸಾಗಿ ಸಂಪನ್ನಗೊಳ್ಳಲಿದೆ.


ಪಂಜಿನ ಮೆರವಣಿಗೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಭಾಗವಹಿಸಲಿದ್ದಾರೆ‌.