ಗಾಂಧಿನಗರ:ಕೆಪಿಎಸ್ ನಲ್ಲಿ ಕೋಟೆ ಪೌಂಡೇಶನ್ ವತಿಯಿಂದ ಕನ್ನಡಕ ವಿತರಣೆ ಹಾಗೂ ಸ್ಮಾರ್ಟ್ ಬೋರ್ಡ್ ಉದ್ಘಾಟನೆ

0

ಗಾಂಧಿನಗರ ಕೆ ಪಿ ಎಸ್ ನಲ್ಲಿ ಕೋಟೆ ಪೌಂಡೇಶನ್ ರಿ ರೈಟ್ ಟು ಲಿವ್ ವತಿಯಿಂದ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ ಹಾಗೂ ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮ ಆ 13 ರಂದು ನಡೆಯಿತು.

ಶಾಲಾ ಸಮಿತಿ ಕಾರ್ಯಧ್ಯಕ್ಷ ಚಿದಾನಂದ ಕುದ್ಪಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಕೋಟೆ ಪೌಂಡೇಶನ್ ಇದರ ಸದಸ್ಯರಾದ ಪ್ರದೀಪ್ ಉಬರಡ್ಕ, ನ ಪಂ ಸದಸ್ಯ ಶರೀಫ್ ಕಂಠಿ, ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಸಮದ್, ಪ್ರೌಢ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಬ್ರಾಹಿಂ, ಕೆ ಪಿ ಎಸ್ ಸಮಿತಿ ಸದಸ್ಯ ರಾಮ ಮುರಳಿ, ಪತ್ರ ಕರ್ತರು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಜೆ ಕೆ ರೈ,ಉಪ ಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಲಕ್ಷ್ಮಿ,ಮುಖ್ಯ ಉಪಾಧ್ಯಾಯ ಪದ್ಮನಾಭ ಅತ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.


ಉಪನ್ಯಾಸಕ ಪ್ರದೀಪ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.