ಎಡಮಂಗಲ :ಭೀಕರ ಗಾಳಿ ಮಳೆಗೆ ಬರೆ ಕುಸಿತ, ಮನೆಗೆ ಹಾನಿ

0

ಎಡಮಂಗಲದಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ವಿಜಯ ಕುಮಾರ್ ಮಾಲೆಂಗಿರಿ ಎಂಬವರ ಮನೆಗೆ ಬರೆ ಜರಿದು ಹಾನಿಯಾಗಿದೆ.
ಮನೆಯ ಒಂದು ಬದಿಯಲ್ಲಿರುವ ಬರೆ ಜರಿದು ಟ್ಯಾರಿಸ್ ಮೇಲೆ ಹೋಗುವ ಮೆಟ್ಡಿಲುಗಳಿಗೆ ಹಾನಿಯಾಗಿದೆ.


ಅಲ್ಲದೆ ಗೋಡೆಗೂ ಮಣ್ಣಿನ ರಾಶಿ ಜರುದಿ ಬಿದ್ದಿರುವುದಾಗಿ ತಿಳಿದು ಬಂದಿದೆ‌.


ವಿಪರೀತ ಗಾಳಿ ಬಂದಿರುವುದರಿಂದ ವಿಜಯ ಕುಮಾರ್ ಮತ್ತು ಪ್ರಸಾದ್ ಮಾಲೆಂಗಿರಿ ಎಂಬವರ ತೋಟದಲ್ಲಿ ಅಡಿಕೆ ಮರಗಳು ಕೂಡಾ ಮುರಿದು ಬಿದ್ದಿದ್ದು ಅಪಾರ ಹಾನಿಯಾಗಿದೆ.