ದೊಡ್ಡತೋಟ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರದ್ದಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲ್ಲೂಕು ಜಾಲ್ಸುರು ವಲಯದ ದೊಡ್ಡತೋಟ ಒಕ್ಕೂಟದ ಸದಸ್ಯರುಗಳಿಂದ ದೊಡ್ಡತೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದ ಶ್ರದ್ದಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಆ.11ರಂದು ನಡೆಸಲಾಯಿತು.

ಶಾಲಾಭಿವೃದ್ಧಿ ಸಮಿತಿಯವರು ಕಳೆ ಕೊಚ್ಚುವ ಯಂತ್ರ ನೀಡಿ ಸಹಕರಿಸಿದರು‌.


ಈ ಸಂದರ್ಭದಲ್ಲಿ ದೊಡ್ಡತೋಟ ಒಕ್ಕೂಟ ಅಧ್ಯಕ್ಷ ಪ್ರವೀಣ್ ಕುಮಾರ್, ಅಮರಮುಡ್ನರು ಗ್ರಾಮ ಪಂಚಾಯತ್ ಸದಸ್ಯ ಪೂವಪ್ಪ ಗೌಡ ಅರ್ನೋಜಿ, ಶಾಲಾ ಶಿಕ್ಷಕ ಚಿದಾನಂದ, ಜಾಲ್ಸೂರು ವಲಯ ಮೇಲ್ವಿಚಾರಕ ತೀರ್ಥರಾಮ ಮತ್ತು ದೊಡ್ಡತೋಟ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಪವಿತ್ರ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿ ಶ್ರಮ ಸೇವೆ ನಡೆಸಿದರು.