ಬೆಳ್ಳಾರೆ : ದ.ಕ.ರಬ್ಬರ್ ಇಂಡಸ್ಟ್ರೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್ ಸಭೆ

0

ದ.ಕ.ರಬ್ಬರ್ ಇಂಡಸ್ಟೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್ ನ ಸಭೆಯು ಆ.12 ರಂದು ಬೆಳ್ಳಾರೆ ಕಲ್ಪವೃಕ್ಷ ಆರ್ಕೇಡ್ ನಲ್ಲಿ ನಡೆಯಿತು.
ಕೆ.ಎಫ್.ಡಿ.ಸಿ ರಬ್ಬರ್ ಕಾರ್ಮಿಕರಿಗೆ ಪ್ರತೀ ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗುತ್ತಿದ್ದು ಅದು ಜು.31 ರಂದು ಅವಧಿ ಗೊನೆಗೊಂಡಿದ್ದು ಹೊಸ ಒಪ್ಪಂದಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಸದಸ್ಯರ ಸಲಹೆಗಳನ್ನು ಸ್ವೀಕರಿಸಲಾಯಿತು.


ಸಭೆಯಲ್ಲಿ ದ.ಕ.ರಬ್ಬರ್ ಇಂಡಸ್ಟ್ರೀಸ್ & ಎಂಪ್ಲಾಯಿಸ್ ಇದರ ಅಧ್ಯಕ್ಷ ಸೆಲ್ವಕುಮಾರ್ ಕೊಂಬಾರು, ಕಾರ್ಯಾಧ್ಯಕ್ಷ ದಯಾಳನ್ ಬಾರ್ಪಣೆ, ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ (ಆನಂದ) ಉಪಾಧ್ಯಕ್ಷರುಗಳಾದ ಕೃಷ್ಣಕುಮಾರ್ ದರ್ಖಾಸ್ತು, ಎಂ.ಕುಮಾರ್ ಸಿ.ಕೂಪ್, ಕೃಷ್ಣವೇಣಿ ಕುಕ್ಕಂದೂರು, ಕೋಶಾಧಿಕಾರಿ ಕಣ್ಣನ್ ಓಟಕಜೆ, ಸದಸ್ಯರಾದ ಶಣ್ಮುಖರಾಜ, ಪತ್ತಿರ್ , ಬಾಲಸುಬ್ರಹ್ಮಣ್ಯಂ 72,ಶಿವಜ್ಞಾನ ಸೆಲ್ವಂ 72, ಚಂದ್ರಶೇಖರ ಕೋಣಾಜೆ,ಕೃಷ್ಣಮೂರ್ತಿ ಮೊಗಪ್ಪೆ, ಶಿವನಾಥನ್,ಸವರಿಯಪ್ಪ ಕಲ್ಲೋಣಿ, ಗಣೇಶಲಿಂಗಂ, ಹರಿಶ್ಚಂದ್ರ ದರ್ಖಾಸ್ತು,ರಾಮರ್ ಬಿಳಿನೆಲೆ ಮತ್ತಿತರರು ಉಪಸ್ಥಿತರಿದ್ದರು.