ಕಲ್ಲುಗುಂಡಿ : ಸ್ಪಾಟ್ ಕಂಪ್ಯೂಟರ್ಸ್, ಗ್ರಾಮಒನ್ ಮತ್ತು ಕೆನರಾ ಬ್ಯಾಂಕ್ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ

0


ಸ್ಪಾಟ್ ಕಂಪ್ಯೂಟರ್, ಸಂಪಾಜೆ ಗ್ರಾಮ್ ಒನ್ ಮತ್ತು ಕೆನರಾ ಬ್ಯಾಂಕ್ ಇವರ ಜಂಟಿ ಆಶ್ರಯದಲ್ಲಿ ೭೮ನೇ ಸ್ವಾತಂತ್ರ್ಯೋತ್ಸವನ್ನು ಕಲ್ಲುಗುಂಡಿ ಚರ್ಚ್ ಕಾಂಪ್ಲೆಕ್ಸ್‌ನ ಎದುರು ಆಚರಿಸಲಾಯಿತು. ನಿವೃತ್ತ ಶಿಕ್ಷಕ ಚಿದಾನಂದ ಯು.ಎಸ್.ರವರು ದ್ವಜಾರೋಹಣವನ್ನು ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿಗ್ರಾಮ ಒನ್ ಸಂಪಾಜೆ ಮತ್ತು ಸ್ಪಾಟ್ ಕಂಪ್ಯೂಟರ್‌ನ ಮ್ಹಾಲಕರಾದ ಕಿಶೋರ್ ಕುಮಾರ್‌ರವರು ಪ್ರಸ್ತಾವಿಕ ಮಾತಿನೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕೆನರಾ ಬ್ಯಾಂಕಿನ ಸಿಬ್ಬಂದಿಗಳಾದ ಕು|ಪ್ರಿಯಾ, ಕು|ನೀಮ, ಶ್ರೀಮತಿ ಶ್ರೀಜಾ ಈಶ್ವರ ಆಚಾರ್ಯ, ಜೂಡೆನ್ ಗ್ರೂಪಿನ ಸಿಬ್ಬಂದಿ ವರ್ಗ, ಮೆಟ್ರೋ ಫರ್ನಿಚರ್ಸ್‌ನ ಇಬ್ರಾಹಿಂ ಹಾಗೂ ಕೆ ಕೆ ಕಂಪ್ಯೂಟರ್ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕಂಪ್ಯೂಟರ್ ಕಲಿಕಾ ಕೇಂದ್ರದ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈಶ್ವರ ಆಚಾರ್ಯರವರು ವಂದಿಸಿದರೆ, ಶಿಕ್ಷಕಿ ಶ್ರೀಮತಿ ವಿದ್ಯಾರವರು ನಿರೂಪಿಸಿದರು.
ಚಿತ್ರ : ಸ್ಟುಡೀಯೋ ಪಾಂಟ್, ಕಲ್ಲುಗುಂಡಿ