ಗುತ್ತಿಗಾರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ

0

ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ವಿಶ್ವ ಹಿಂದೂ ಜಾಗರಣಾ ವೇದಿಕೆ ಗುತ್ತಿಗಾರು ವಲಯ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಆ.14 ರಂದು ಗುತ್ತಿಗಾರಿನಲ್ಲಿ ನಡೆಯಿತು.


ಹಿಂದೂ ಜಾಗರಣ ವೇದಿಕೆಯಲ್ಲಿ ಜಿಲ್ಲಾ ಸಂಯೋಜಕರಾದ ಮೋಹನ್ ದಾಸ್ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಗುತ್ತಿಗಾರು ವಲಯ ಅಧ್ಯಕ್ಷ ಸತೀಶ್ ಮೂಕಮಲೆ, ಸಚಿನ್ ವಳಲಂಬೆ ಉಪಸ್ಥಿತರಿದ್ದರು.

ಬೃಹತ್ ಮೆರವಣಿಗೆ: ಕಾರ್ಯಕ್ರಮ ಬಾಕಿಲದಿಂದ ಆರಂಭಗೊಂಡು ನೂರಾರು ರಾಷ್ಟ್ರಭಕ್ತರು ಪಂಜನ್ನು ಹಿಡಿದು ಅಖಂಡ ದೇಶದ ಕನಸನ್ನು ಹೊತ್ತು ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತ ಸಾಗಿದರು.