ಅಡಿಕೆ ಮರದಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಓಂ ಪ್ರಕಾಶ್ ಅರಮನೆಗಯ ನಿಧನ

0

ಅಡಿಕೆ ತೆಗೆಯುತ್ತಿದ್ದಾಗ ಆಯ ತಪ್ಪಿ‌ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಮರ್ಕಂಜ ಗ್ರಾಮದ ಅರಮನೆಗಯ ನಿವಾಸಿ ಎಲ್ಯಣ್ಣ ಎಂಬವರ ಪುತ್ರ ಓಂಪ್ರಕಾಶ್ ಎಂಬವರು ಬೆಳ್ಳಾರೆಯ ರಾಮಚಂದ್ರ ಎಂಬವರ ತೋಟದಲ್ಲಿ ಅಡಿಕೆ ಮರದಿಂದ ಆಯ ತಪ್ಪಿ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಸೇವಾ ಭಾರತಿ ಕನ್ಯಾಡಿ ಕೊಕ್ಕಡ ಇಲ್ಲಿ ಚಿಕಿತ್ಸೆ ಪಡೆದು ಸ್ವಲ್ಪ ಚೇತರಿಕೆಗೊಂಡಿದ್ದ ಇವರನ್ನು ಮನೆಗೆ ಕರೆದು ಕೊಂಡು ಬರಲಾಗಿತ್ತು. ಆದರೆ ಇವರ ದೇಹ ಇತ್ತೀಚೆಗೆ ಚಿಕಿತ್ಸೆಗೆ ಸ್ಪಂಧಿಸದ ಕಾರಣ ಅವರು ಆ.11ರಂದು ಮನೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 35 ವರ್ಷ ಪ್ರಾಯವಾಗಿತ್ತು.

ಮೃತರು ತಂದೆ, ತಾಯಿ, ಸಹೋದರ, ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.