ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆ.15 ರಂದು ನಡೆಯಿತು.

ಮಹಾತ್ಮ ಗಾಂಧೀಜಿ ಮತ್ತು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಮಾಡಲಾಯಿತು.

ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಧನಂಜಯ ರವರು ಧ್ವಜಾರೋಹಣವನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ಎಂ.ಬಿ.ಅಶೋಕ್ ಕುಮಾರ್ ಮೂಲೆಮಜಲುರವರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ವಿಶೇಷ ಅಧಿಕಾರಿಗಳಾದ ಡಾl ಶಿವಕುಮಾರ್ ಹೊಸೋಳಿಕೆ ರವರು ಉಪಸ್ಥಿತರಿದ್ದು ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಮಹತ್ವದ ಕುರಿತಾಗಿ ಮಾತನಾಡಿ ಶುಭ ಹಾರೈಸಿರುತ್ತಾರೆ. ಗ್ರಾ. ಪಂ.ಉಪಾಧ್ಯಕ್ಷರಾದ ವೆಂಕಟೇಶ್ ಎಚ್ ಎಲ್ ರವರು ಮತ್ತು ಗ್ರಾ. ಪಂ ಸದಸ್ಯರುಗಳಾದ ಹರೀಶ್ ಎಸ್ ಇಂಜಾಡಿ ಹಾಗೂ ಶ್ರೀಮತಿ ಭಾರತಿ ದಿನೇಶ್ ರವರು ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರುಗಳಾದ ಶ್ರೀಮತಿ ಮಲ್ಲಿಕಾ ಕುಲ್ಕುಂದ, ಶ್ರೀಮತಿ ಸವಿತಾ ಭಟ್, ಮೋಹನ ಕೋಟಿ ಗೌಡನ ಮನೆ, ಶ್ರೀಮತಿ ಜಯಂತಿ, ಶಿವರಾಮ ನೆಕ್ರಾಜೆ, ಶ್ರೀಮತಿ ಭವ್ಯಕುಮಾರಿ ಕೆ ಎಲ್, ದಿಲೀಪ್ ಉಪ್ಪಳಿಕೆ, ಗಿರೀಶ್ ಆಚಾರ್ಯ, ಶ್ರೀಮತಿ ಲಲಿತ ಗುಂಡಡ್ಕ ರವರು ಉಪಸ್ಥಿತರಿದ್ದರು.. ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಅಧ್ಯಕ್ಷರು,MBK, ಬಿಸಿ ಸಖಿ-ಪದಾಧಿಕಾರಿಗಳು-ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು, ಸದಸ್ಯರುಗಳು, ಗ್ರಂಥಾಲಯದ ಗ್ರಂಥ ಪಾಲಕಿ, ವಿಶೇಷ ಚೇತನ ಕಾರ್ಯಕರ್ತೆ, ಊರಿನ ಗ್ರಾಮಸ್ಥರು, ವಾಣಿಜ್ಯ ಮಳಿಗೆಗಳ ಮಾಲ್ಹಕರುಗಳು, ವ್ಯಾಪಾರಸ್ಥರು, ಗ್ರಾ. ಪಂ. ಸಿಬ್ಬಂದಿ ವರ್ಗದವರು, ಗ್ರಾ. ಪಂ. ಘನ ತ್ಯಾಜ್ಯ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ ಎನ್ ರವರು ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ. ರವರು ಸದರಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಗೈದರು.