ಅಂಬಟೆಡ್ಕ : ಶ್ರೀ ಸಾಯಿ ಸೇವಾ ಧಾಮದಲ್ಲಿ ಕೌಶಲ್ಯಭಿವೃದ್ದಿ ಶಿಬಿರದ ಸಮಾರೋಪ

0

ಸುಳ್ಯದ ಅಂಬಟೆಡ್ಕದಲ್ಲಿರುವ ಶ್ರೀ ಸಾಯಿ ಸೇವಾಧಾಮದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ, ಸುಳ್ಯ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಕೌಶಾಲ್ಯಾಭಿವೃದ್ದಿ ಕಾರ್ಯಕ್ರಮದ ಎರಡನೇ ಬ್ಯಾಚ್ ನ ಸಮಾರೋಪ ಸಮಾರಂಭ ಆ.13ರಂದು‌ ನಡೆಯಿತು.

ಭಗವನ್ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ದ.ಕ. ಜಿಲ್ಲಾ ಅಧ್ಯಕ್ಷ ಪ್ರಸನ್ನ ಎನ್. ಭಟ್ ಹಾಗೂ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಮೂಕಾಂಬಿಕಾ ಎನ್ ರಾವ್ ಹಾಗೂ ಎಲ್ಲಾ ಸಾಯಿ ಸದ್ಬಕ್ತರು, ಹೊಲಿಗೆ ತರಬೇತಿಯ ಮುಖ್ಯ ಗುರು ಜಯಲಕ್ಷ್ಮಿ ದಯಾನಂದ, ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ನಡೆಯಿತು.

ಮೂರನೇ ಬ್ಯಾಚ್ ನ ಹೊಲಿಗೆ ಉಚಿತ ಶಿಬಿರ ನಡೆಯಲಿದ್ದು ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು.