ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ತಕ್ಕಮುಖ್ಯಸ್ಥರಾಗಿ ಕೆ.ಡಿ. ಕುಶಾಲಪ್ಪ ಕುಂಬಳಚೇರಿ ನೇಮಕ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನೂತನ ತಕ್ಕ ಮುಖ್ಯಸ್ಥರಾಗಿ ಕೆ.ಡಿ. ಕುಶಾಲಪ್ಪ ಕುಂಬಳಚೇರಿ ಹಾಗೂ ಕುಂಬಳಚೇರಿ ಕುಟುಂಬದ ಹಿರಿಯರಾಗಿ ರಾಮಚಂದ್ರ ಕುಂಬಳಚೇರಿ ಅವರು ನೇಮಕಗೊಂಡಿದ್ದಾರೆ.

ಕುಂಬಳಚೇರಿ ಕುಟುಂಬದ ಹಿರಿಯರಾಗಿದ್ದು, ದೇವಸ್ಥಾನದ ತಕ್ಕಮುಖ್ಯಸ್ಥರಾಗಿದ್ದ ಗಣಪತಿ ಕುಂಬಳಚೇರಿ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಕುಂಬಳಚೇರಿ ಕುಟುಂಬದ ಹಿರಿಯರಾಗಿ ರಾಮಚಂದ್ರ ಕುಂಬಳಚೇರಿ ಮತ್ತು ಶ್ರೀ ಶಾಸ್ತಾವು ದೇವಸ್ಥಾನದ ತಕ್ಕ ಮುಖ್ಯಸ್ಥರಾಗಿ ಕುಶಾಲಪ್ಪ ಕುಂಬಳಚೇರಿ ಅವರು ನೇಮಕಗೊಂಡಿದ್ದಾರೆ.


ಕುಂಬಳಚೇರಿ ಕುಟುಂಬದ ವತಿಯಿಂದ ಈ ಆಯ್ಕೆ ನಡೆದಿದ್ದು, ಕುಟುಂಬದ ವತಿಯಿಂದ ಪತ್ರಮೂಲಕ ದೇವಸ್ಥಾನದ ಆಡಳಿತ ಮಂಡಳಿಗೆ ಕಳುಹಿಸಿಕೊಡಲಾಗಿದೆ.