ಬಿದ್ದು ಸಿಕ್ಕಿದ ನಗದು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರವೀಣ್ ಗ್ಯಾರೇಜ್ ನೌಕರ ವಿಜಯ್ ಕುಮಾರ್ ಕಲ್ಲಪಳ್ಳಿ

0

ಸುಳ್ಯದ ಜಟ್ಟಿಪಳ್ಳ ರಸ್ತೆಯ ಲ್ಲಿರುವ ಬಿ.ಟಿ.ಪೊನ್ನಪ್ಪ ರವರ ಮಾಲಕತ್ವದ ಪ್ರವೀಣ್ ಮೋಟಾರ್ ವರ್ಕ್ಸ್ ಗ್ಯಾರೇಜ್ ನಲ್ಲಿ ನೌಕರನಾಗಿರುವ ವಿಜಯ್ ಕುಮಾರ್ ಕಲ್ಲಪಳ್ಳಿ ಯವರಿಗೆ ನಗದು ಬಿದ್ದು ಸಿಕ್ಕಿದ್ದು ಅದನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಜಟ್ಟಿಪಳ್ಳ ರಸ್ತೆಯಿಂದ ಅನ್ಸಾರಿಯಾ ನಾವೂರು ಗಾಂಧಿನಗರ ಕಡೆಗೆ ಹೋಗುತ್ತಿರುವಾಗ
500 ಮುಖ ಬೆಲೆಯ
ರೂ. 10,500 ನಗದು ಬಿದ್ದು ಸಿಕ್ಕಿತ್ತು.
ಬಿದ್ದು ಸಿಕ್ಕಿದ ನಗದನ್ನು ತಮ್ಮ ಗ್ಯಾರೇಜ್ ಮಾಲಕರಾದ ಪುನೀತ್ ಬಾಟೋಳಿಯವರಿಗೆ ಅವರು ತಂದೊಪ್ಪಿಸಿದರು.


ಈ ವಿಷಯವನ್ನು ಪುನೀತ್ ಬಾಟೋಳಿಯವರು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಯವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಈ ವಿಷಯದ ಕುರಿತು ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಯಿತು. ವರದಿಯನ್ನು ಗಮನಿಸಿದ ನಗದು ಕಳೆದುಕೊಂಡ ಶಾಹೀದ್ ಕಟ್ಟೆಕ್ಕಾರ್ ರವರು ದೂರವಾಣಿ ಕರೆ ಮಾಡಿ ಹಣ ಕಳೆದುಕೊಂಡ ವಿಷಯವನ್ನು ತಿಳಿಸಿದರು.
ಅದರಂತೆ ಸೂಕ್ತ ಮಾಹಿತಿ ನೀಡಿದ ಆಧಾರದಲ್ಲಿ ನಗದು ಕಳಕೊಂಡಿರುವ ಶಾಹೀದ್ ರವರಿಗೆ ಸುದ್ದಿ ಕಚೇರಿಯಲ್ಲಿ ಎಲ್ಲರ ಸಮ್ಮುಖದಲ್ಲಿ ನಗದನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಶಿವಪ್ರಸಾದ್ ಆಲೆಟ್ಟಿ,ಪುನೀತ್ ಬಾಟೋಳಿ, ರಿಯಾಝ್ ಕಟ್ಟೆಕ್ಕಾರ್, ಸುದ್ದಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿಜಯಕುಮಾರ್ ರವರ ಪ್ರಾಮಾಣಿಕತೆಯನ್ನು ಎಲ್ಲರೂ ಶ್ಲಾಘಿಸಿದರು.