ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೀಡಿದ ಪ್ರಾಸಿಕ್ಯೂಷನ್ ಗೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆ

0

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿ ಎಂ ವಿರುದ್ಧ ತಕ್ಷಣ ಯಾವುದೇ ಕ್ರಮ ಕೈಗೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಬಗ್ಗೆ ಕರ್ನಾಟಕ ಹೈಕೋರ್ಟ್‌ ಇಂದು ವಿಚಾರಣೆ ಮುಂದೂಡಿ ತಾತ್ಕಾಲಿಕ ತಡೆ ನೀಡಿದ್ದು ಈ ಹಿನ್ನಲೆ ನ್ಯಾಯಾಲಯದಲ್ಲಿ ಪ್ರಾಥಮಿಕ ಜಯ ಲಭಿಸಿದೆ ಎಂದು ಆ 18 ರಂದು ಸಂಜೆ ಸುಳ್ಯ ಖಾಸಗಿ ಬಸ್ ತಂಗುದಾಣದ ಬಳಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ನಡೆಸಿದರು.


ಈ ಸಂಧರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ ಸಿ ಜಯರಾಮ್,ನ. ಪಂ ಸದಸ್ಯ ಎಂ ವೆಂಕಪ್ಪ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೊಲ್ಚಾರ್ ಮಾತನಾಡಿ ‘ನ್ಯಾಯಲಯದ ಇಂದಿನ ತೀರ್ಪು ಸತ್ಯಕ್ಕೆ ಜಯ ಎಂಬುದುದನ್ನು ಸೂಚಿಸಿದೆ.


ಬಿ ಜೆ ಪಿ ಯವರು ಸಿದ್ದರಾಮಯ್ಯ ರವರ ಮೇಲೆ ಹುನ್ನಾರ ನಡೆಸಿ ಹಿಂದಿನ ಬಾಗಿಲಿನ ಮೂಲಕ ರಾಜಕೀಯ ಷಡ್ಯಂತ್ರ ಮಾಡುವುದನ್ನು ಸತ್ಯ ದೇವತೆ ತಡೆದಂತೆ ಆಗಿದೆ.ಇವರ ಪ್ರಯತ್ನಕ್ಕೆ ಮುಖ ಭಂಗ ಆಗುವ ರೀತಿಯಲ್ಲಿ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಲಭಿಸಿದೆ.
ಇದೇ ನ್ಯಾಯ ಮುಂದೆಯೂ ನಮಗೆ ಸಿಗುವ ಭರವಸೆ ನಮಗೆಲ್ಲರಿಗೂ ಇದೆ ಎಂದರು.

ಈ ಸಂಧರ್ಭದಲ್ಲಿ ಬ್ಲಾಕ್ ಸಮಿತಿ ಕಾರ್ಯದರ್ಶಿ ಪಿ ಎಸ್ ಗಂಗಾಧರ್, ಪಕ್ಷದ ಮುಖಂಡರುಗಳಾದ ಸುರೇಶ್ ಅಮೈ, ಧರ್ಮಪಾಲ ಕೊಯಿಂಗಾಜೆ,ಕೆ.ಗೋಕುಲ್ ದಾಸ್ ಅಬ್ಬಾಸ್ ಎ ಬಿ, ಶಿವರಾಮ ಮಡಪ್ಪಾಡಿ, ಶಾಫಿ ಕುತ್ತಮಟ್ಟೆ,ಸಲೀಮ್ ಪೆರಂಗೋಡಿ,ವಸಂತ ಪೆಲ್ತಡ್ಕ,ಬೋಜಪ್ಪ ನಾಯ್ಕ, ಚಂದ್ರಶೇಖರ್ ಉಬರಡ್ಕ,ಶರೀಫ್ ಕಂಠಿ,ರಾಜು ಪಂಡಿತ್,ಅಶೋಕ್ ಚೂಂತಾರ್, ರಾಧಾಕೃಷ್ಣ ಪರಿವಾರಕ್ಕಾನ, ರಿಯಾಜ್ ಕಟ್ಟೆಕ್ಕಾರ್ಸ್, ಮುಜೀಬ್ ಪೈಚಾರ್, ಚಿತ್ರಕುಮಾರಿ ಪಾಲಡ್ಕ, ಗಣೇಶ ಪಾಲಡ್ಕ,ರಂಜಿತ್ ರೈ, ಸೌಕತ್ ಅಲಿ ಮೇನಾಲ,ಶಹೀದ್ ಪಾರೆ,ಸುರೇಶ್ ಕಾಮತ್, ನಂದರಾಜ್ ಸಂಕೇಶ್, ಶರೀಫ್ ರಿಲಾಕ್ಸ್, ರಹೀಂ ಬೀಜದಕಟ್ಟೆ,ಹಾಗೂ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.