ತ್ರೋಬಾಲ್ ಪಂದ್ಯಾಟ : ರಾಷ್ಟ್ರೀಯ ತಂಡಕ್ಕೆ ಇಬ್ಬರು ಶಿಕ್ಷಕರು ಆಯ್ಕೆ

0

2024 ಸೆಪ್ಟಂಬರ್ ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ತ್ರೋಬಾಲ್ ತಂಡದ ನಾಯಕಿ ಶೀಲಾವತಿ ಕೆ.ಎನ್ ಶಿಕ್ಷಕಿ ಸ ಕಿ ಪ್ರಾ. ಶಾಲೆ ಬಿಳಿಯಾರು ಹಾಗೂ ನೆಲ್ಯಾಡಿ ಪಿ.ಎಂ.ಶ್ರೀ ಶಾಲೆಯ ಸಹಶಿಕ್ಷಕಿ ಸುಜಾತ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶೀಲಾವತಿಯವರು ಅರಂತೋಡು ಪೂಜಾರಿ ಮನೆ ಮಾಧವ ಮಾಸ್ಟರ್ ಇವರ ಪತ್ನಿ. ಇವರು ಟೆನ್ನಿಕ್ ಕ್ವಾಯ್ಟ್ ಟಬಲ್ಸ್ ಮತ್ತು ಸಿಂಗಲ್ಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದರು.

ಸುಜಾತ ಕೆ ಸಹ ಶಿಕ್ಷಕಿ ಪಿಎಂಶ್ರೀ ಸ. ಹಿ ಪ್ರಾ ಶಾಲೆ . ನೆಲ್ಯಾಡಿ. ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಶ್ರೀಪಾದ ಶ್ರೀ ಕೇಶವ ಗೌಡ ಕೊರಮೇರು ಇವರ ಪತ್ನಿ. ಇವರು ಖೊ ಖೋ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದರು.