ಸುದ್ದಿ ಮತ್ತು ಷರಾ ಪ್ರಕಾಶನ ಆಶ್ರಯದಲ್ಲಿ ನಡೆದ ದೇಶಭಕ್ತಿಗೀತೆ ಗಾಯನದಲ್ಲಿ ಸುಳ್ಯ ಎನ್ನೆoಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ

0

ಸ್ವಾತಂತ್ರ್ಯ ದಿನದ ಅಂಗವಾಗಿ ಸುದ್ದಿ ಸಮೂಹ ಸಂಸ್ಥೆ ಮತ್ತು ಷರಾ ಪ್ರಕಾಶನ ಸುಳ್ಯ ಇವರು ನಡೆಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.

ತಂಡದಲ್ಲಿ ಜೀವಿತ್ ಕುಮಾರ್ ಎಂ.ಜೆ, ನಿಖಿತಾ ಎನ್.ಎಂ ಹೆಬ್ಬಾರ್, ಶರಣ್ಯ ಪಿ.ಜಿ., ಪವಿತ್ರ ಆರ್, ಸುಗುಣ ಎಸ್, ಆಜ್ಞ ಎಸ್ ಪಿ, ಶ್ರೇಯ ಎಂ.ಜಿ, ತೃಷ ಆರ್ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.