ಸುಳ್ಯದಲ್ಲಿ ಸುಧಾಕರ ಕೊಚ್ಚಿ ಅವರ ನೇಶನಲ್ ಇನ್ಸೂರೆನ್ಸ್ ಕಚೇರಿ ಸ್ಥಳಾಂತರ

0

ಕಳೆದ 44 ವರ್ಷಗಳಿಂದ ಸುಳ್ಯದ ಜನತೆಗೆ ನಿರಂತರ ಜನರಲ್ ಇನ್ಸೂರೆನ್ಸ್ ಸೇವೆಗಳನ್ನು ಒದಗಿಸುತ್ತಿರುವ ಸುಧಾಕರ ಕೊಚ್ಚಿ (ನಿವೃತ್ತ ಎ.ಒ. (ಡಿ.), ಎನ್.ಐ.ಸಿ.ಎಲ್.) ಅವರು ತಮ್ಮ ನೇಶನಲ್ ಇನ್ಸೂರೆನ್ಸ್ ಪೋರ್ಟಲ್ ಕಛೇರಿಯನ್ನು ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಸಮೀಪದ ಡಿ.ಎಂ. ಕಾಂಪ್ಲೆಕ್ಸ್‍ಗೆ ಸ್ಥಳಾಂತರಿಸಿದ್ದಾರೆ.

ಸುಳ್ಯದ ಪ್ರಥಮ ನೇಶನಲ್ ಮೆಡಿ – ಕ್ಲೈಮ್ ಪಾಲಿಸಿಯ ಗ್ರಾಹಕರಾದ ಭಾರತ್ ಆಗ್ರೊ ಸುಳ್ಯ ಇದರ ಮಾಲಿಕರಾಗಿರುವ,ರೊ| ರಾಮಚಂದ್ರ ಪೆರಿಯಡ್ಕ ಅವರು ದೀಪ ಬೆಳಗಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಸಮರ್ಥ ನಿಧಿ ಲಿಮಿಟೆಡ್ ನ ವಿಭಾಗೀಯ ಅಧಿಕಾರಿ ಹರಿಪ್ರಸಾದ್ ಎನ್.ಆರ್. ಹಾಗೂ ನ್ಯಾಯವಾದಿ ರಾಮಕೃಷ್ಣ ಎ. ಸುಳ್ಯ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಉದ್ದೇಶವು ಸುಳ್ಯ ಪರಿಸರದ ಜನತೆಗೆ ಸದಾ ನಂಬಿಕೆಗೆ ತಕ್ಕ ವಿಶ್ವಾಸಾರ್ಹ ವಿಮಾ ಸೇವೆಗಳನ್ನು ಒದಗಿಸುವುದು. ಈ ಪೋರ್ಟಲ್ ಕಛೇರಿ ನಮ್ಮ ಸೇವೆಗಳನ್ನು ಅನುಕೂಲಕರವಾಗಿ ಒದಗಿಸುವ ದಿಶೆಯಲ್ಲಿ ದಿಟ್ಟ ಹೆಜ್ಜೆಯಾಗಿದೆ, ಎಂದು ಹೇಳಿದರು. ಸುಳ್ಯದಲ್ಲಿ ಕೇವಲ ಈ ಕಛೇರಿ ಸುಧಾಕರ ಕೊಚ್ಚಿ ಅವರ ಅಧಿಕೃತ ನೇಶನಲ್ ಇನ್ಸೂರೆನ್ಸ್ ಪೋರ್ಟಲ್ ಕಛೇರಿ ಆಗಿದ್ದು, ಯಾವುದೇ ಶಾಖೆ, ಹಳೆ ಸ್ಥಳ ಅಥವಾ ಇತರೆ ಖಾಸಗಿ ವ್ಯವಹಾರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.