ಕಂಟ್ರಾಕ್ಟರ್ ಶಶಿಧರ ಆಲೆಟ್ಟಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ – ನುಡಿನಮನ

0

ಆಲೆಟ್ಟಿಯ ನಿವಾಸಿ ಕಂಟ್ರಾಕ್ಟರ್ ಶಶಿಧರ ರವರು ಆ.14 ರಂದು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು ಅವರ ವೈಕುಂಠ ಸಮಾರಾಧನೆ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ವು ಆ.29 ರಂದು ಮೃತರ ಸ್ವಗೃಹ ಆಲೆಟ್ಟಿಯಲ್ಲಿ ನಡೆಯಿತು.

ಮೃತರ ಜೀವನಗಾಥೆಯ ಕುರಿತು ಆಲೆಟ್ಟಿ ಸೊಸೈಟಿ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ ಯವರು ನುಡಿ ನಮನ ಸಲ್ಲಿಸಿದರು.
ಹಿರಿಯರಾದ ಜಿ.ಪಂ.ಮಾಜಿ ಸದಸ್ಯ ದೇವಪ್ಪ ನಾಯ್ಕರವರು ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಆಲೆಟ್ಟಿ ಸದಾಶಿವ ದೇವಸ್ಥಾನದ ಮೊಕ್ತೇಸರರ ಪೈಕಿ ಜಯಪ್ರಕಾಶ್ ಬೈಪಡಿತ್ತಾಯ, ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಪವಿತ್ರನ್ ಗುಂಡ್ಯ ಹಾಗೂ ಮೃತರ ಪತ್ನಿ ಶ್ರೀಮತಿ ನಾರಾಯಣಿ ಆಲೆಟ್ಟಿ, ಪುತ್ರ ರಾಜೇಶ್ ಆಲೆಟ್ಟಿ, ಸಹೋದರಿ ಶ್ರೀಮತಿಉಷಾಸತ್ಯದೇವನ್, ಪುತ್ರಿಯರಾದ ಶ್ರೀಮತಿ ರಜನಿ, ಶ್ರೀಮತಿ ರಾಜಶ್ರೀ,ಶ್ರೀಮತಿ ರಾಜಲಕ್ಷ್ಮಿ, ಕು.ರಜಿತ ಆಲೆಟ್ಟಿ, ಸೊಸೆ ಶ್ರೀಮತಿಪ್ರಣಯಾ, ಅಳಿಯಂದಿರಾದ ಜಯಕರ ಗೋರಡ್ಕ, ಆನಂದ ಆಲೆಟ್ಟಿ, ರಾಮಕೃಷ್ಣ ಶಾಂತಿನಗರ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.