ಲಗೋರಿ ಆಟವನ್ನು ದಸರಾ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡುವಂತೆ ಸ್ಪೀಕರ್ ಯು. ಟಿ. ಖಾದರ್ ಗೆ ಸಂಶುದ್ದೀನ್ ಮನವಿ

0


ಗ್ರಾಮೀಣ ಕ್ರೀಡೆ ಯಾದ ಲಗೋರಿ ಆಟ ಕರ್ನಾಟಕ ದಲ್ಲಿ ಹುಟ್ಟಿದ ಲಗೋರಿ ಆಟವನ್ನು ನಾಡ ಹಬ್ಬ ದಸರಾ ಕ್ರೀಡಾ ಕೂಟ ಮುಖ್ಯಮಂತ್ರಿ ಕಪ್ ನಲ್ಲಿ ಅಧಿಕೃತ ವಾಗಿ ಸೇರ್ಪಡೆ ಗೊಳಿಸಬೇಕೆಂದು ಲಗೋರಿ ರಾಜ್ಯ ಸಮಿತಿ ಯ ಉಪಾಧ್ಯಕ್ಷ ವಾಲಿಬಾಲ್ ಜಿಲ್ಲಾ ಉಪಾಧ್ಯಕ್ಷ ಎಸ್. ಸಂಶುದ್ದೀನ್ ಸ್ಪೀಕರ್ ಯು. ಟಿ. ಖಾದರ್ ರವರಿಗೆ ಮನವಿ ಅರ್ಪಿಸಿದರು.


ಮನವಿಗೆ ಸ್ಪಂದಿಸಿದ ಯು. ಟಿ. ಖಾದರ್ ರವರು ಲಗೋರಿ ಆಟಕ್ಕೆ 25 ವರ್ಷಗಳ ಹಿಂದೆಯೇ ಲಗೋರಿ ನಿಯಮಾವಳಿಯನ್ನು ರೂಪಿಸಿರುವ ದೊಡ್ಡಣ್ಣ ಬರಮೇಲು ರವರ ರೂಲ್ಸ್ ಅಳವಡಿಸಿ ದಸರಾ ಕ್ರೀಡಾ ಕೂಟ ದಲ್ಲಿ ಸೇರ್ಪಡೆ ಗೊಳಿಸುವಂತೆ ಕ್ರೀಡಾ ಆಯುಕ್ತರಿಗೆ ಶಿಫಾರಸ್ಸು ಮಾಡಿದರು.


ಈ ಸಂದರ್ಭದಲ್ಲಿ ವಿಧಾನಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ಕೇರಳ ಮಾಜಿ ಆರೋಗ್ಯ ಸಚಿವರಾದ ವಿ. ಎಸ್. ಶಿವಕುಮಾರ್ ಉಪಸ್ಥಿತರಿದ್ದರು