ಕೊಡಗು ಸಂಪಾಜೆ: ಕೃಷಿಕರ ತೋಟಕ್ಕೆ ನಿರಂತರ ಕಾಡಾನೆ ದಾಳಿ

0

ಕೊಡಗು ಸಂಪಾಜೆ ಗ್ರಾಮದ ಚಡಾವು ಪರಿಸರದಲ್ಲಿ ಕೃಷಿಕರ ತೋಟಕ್ಕೆ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸಿದ್ದು, ಕೃಷಿ ಬೆಳೆಗೆ ಹಾನಿಯಾಗಿದೆ.

ಚೆಡಾವು ನಿವಾಸಿಗಳಾದ ಹರೀಶ್ ನಿಡಿಂಜಿ, ಬಾಲಚಂದ್ರ ನಾರ್ಕೋಡು , ಚಂದ್ರಶೇಖರ ದೇವರಗುಂಡ ಅವರ ಕೃಷಿ ತೋಟಕ್ಕೆ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿದ್ದು, ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕೃಷಿಕರು ಸಂಪಾಜೆ ವಲಯಾರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.