ಸೆ.4 : ಕಸ್ತೂರಿರಂಗನ್ ವರದಿಯನ್ನು ವಿರೋಧಿಸಲು, ಹೋರಾಟ ಸಮಿತಿ ರಚಿಸಲು ಸುಬ್ರಹ್ಮಣ್ಯದಲ್ಲಿ ಸಭೆ

0

ಸುಮಾರು 15 ವರ್ಷದಿಂದ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಾ ಬಂದಿರುವ ಸರಕಾರದ ರೈತ ವಿರೋಧಿ ಯೋಜನೆ ವಿರುದ್ಧ, ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಲು ರಾಜ್ಯಮಟ್ಟದ ಹೋರಾಟ ಸಮಿತಿಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಚರ್ಚಿಸಲು ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ಸೆ.4 ರಂದು ಸಭೆ ಕರೆಯಲಾಗಿದೆ. ಕೃಷಿಕ ಭಾಂದವರು, ಬಾದಿತ ಗ್ರಾಮದವರು ಬೆಳಿಗ್ಗೆ 11 ಗಂಟೆಗೆ ಬಂದು ರೈತರ ಉಳಿವಿಗಾಗಿ ಈ ಸಭೆಗೆ ಬಂದು ಸಹಕರಿಸಬೇಕಾಗಿ ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ
ಕಿಶೋರ್ ಶಿರಾಡಿ ಕೇಳಿಕೊಂಡಿದ್ದಾರೆ.