ಪೈಕ-ಗುತ್ತಿಗಾರು ಹನ್ನೆರಡು ಒಕ್ಕಲು ಗೌಡ ಬಾಂಧವರ ಸಭೆ

0

ಪೈಕ -ಗುತ್ತಿಗಾರು ಹನ್ನೆರಡು ಒಕ್ಕಲು ಗೌಡ ಸಮಾಜ ಬಾಂಧವರ ಸಮ್ಮಿಲನ ಸೆ.1 ರಂದು ಗುತ್ತಿಗಾರು ದೇವಿ ಸಿಟಿ ಸಭಾಂಗಣದಲ್ಲಿ ಜರಗಿತು.


ಹನ್ನೆರೆಡು ಒಕ್ಕಲು ವ್ಯಾಪ್ತಿಯ ಊರುಗೌಡರಾದ ಜಗದೀಶ್ ಗೌಡ ಪೈಕ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ಬೈಲಿನ ಕಟ್ಟುಕಟ್ಟಳೆಯ ಬಿ.ಸಿ.ಬಾಲಕೃಷ್ಣ ಗೌಡ ಬಾಕಿಲ, ಸಮಾಜದ ಮುಖಂಡರುಗಳಾದ ಡಿ.ಎಂ.ರಾಮಣ್ಣ ಗೌಡ ವಳಲಂಬೆ, ಬಿ.ಕೆ.ಬೆಳ್ಯಪ್ಪ ಗೌಡ, ಹೂವಪ್ಪ ಗೌಡ ಬೊಮ್ಮದೆರೆ ಪೈಕ, ಸೋಮಶೇಖರ ಗೌಡ ಪೈಕ ಉಪಸ್ಥಿತರಿದ್ದರು.
ಹನ್ನೆರಡು ಒಕ್ಕಲು ವ್ಯಾಪ್ತಿಯ ಪೈಕ, ಚೈಪೆ, ಕುಂಬಾರಕೇರಿ, ವಳಲಂಬೆ, ಬಾಕಿಲ, ಚಣಿಲ, ಗುತ್ತಿಗಾರು, ಚತ್ರಪ್ಪಾಡಿ ಭಾಗದ ಗೌಡ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಕಿಶೋರ್ ಕುಮಾರ್ ಗೌಡ ಬೊಮ್ಮದೆರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಆರ್.ಲೋಕೇಶ್ ಗೌಡ ಪೈಕ ವಂದಿಸಿದರು. ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮ ಗೌಡ ಸಭೆ ಕೈಗೊಂಡ ನಿರ್ಣಯಗಳನ್ನು ವಾಚಿಸಿದರು.