ಹಾಲೆಮಜಲು : ಗಣೇಶ ಚತುರ್ಥಿ ಆಚರಣೆ

0

ಆದರ್ಶ ಯೂತ್ ಕ್ಲಬ್ ಹಾಲೆ ಮಜಲು ಇದರ ಆಶ್ರಯದಲ್ಲಿ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಗಣೇಶ ಚತುರ್ಥಿ ಆಚರಣೆ ಪ್ರಯುಕ್ತ ನವಶಕ್ತಿ ಭಜನಾ ತಂಡ ಹಾಲೆಮಜಲು ಇವರಿಂದ ಮಕ್ಕಳ ಕುಣಿತ ಭಜನೆ ಮತ್ತು ಶ್ರೀ ದುರ್ಗಭಜನಾ ಮಹಿಳಾ ತಂಡ ಹಾಲೆಮಜಲು ಇವರಿಂದ ಬಜನೆ ಸಂಕೀರ್ತನೆ ಕಾರ್ಯಕ್ರಮ ಇಂದು ನಡೆಯಿತು.

ಗಣೇಶ ಚತುರ್ಥಿಯ ಪೂಜಾ ಕಾರ್ಯಗಳನ್ನು ಹರಿಶ್ಚಂದ್ರ ಕುಳ್ಳಂಪಾಡಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಆದರ್ಶ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷ ದಿನೇಶ್ ಹಾಲೆಮಜಲು. ಅಧ್ಯಕ್ಷ ಸತೀಶ್ ಬಂಬುಳಿ, ಕಾರ್ಯದರ್ಶಿ ದೀಪಕ್ ಕುಂಬಡ್ಕ, ಖಜಾಂಜಿ ಆಕರ್ಷ ಕುಳ್ಳಂಪಾಡಿ, ಪೂರ್ವ ಅಧ್ಯಕ್ಷ ದುರ್ಗದಾಸ್ ಕಡ್ಲಾರು ಸೇರಿದಂತೆ ಕ್ಲಬ್ಬಿನ ಗೌರವ ಸಲಹೆಗಾರರು ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿದರು.

ವರದಿ : ಡಿ.ಎಚ್