ಮುಪ್ಪೇರ್ಯ ಗ್ರಾಮದ ಮರುವತಗುಂಡಿ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ವಿಷ್ಣು ಗ್ರೂಪ್ಸ್ ನ ಯುವಕರು

0

ಮುಪ್ಪೇರ್ಯ ಗ್ರಾಮದ ಮರುವತಗುಂಡಿ ಪಂಚಾಯತ್ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚರಿಸಲು ದುಸ್ತರವಾಗಿತ್ತು. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಪ್ರವೀಣ ಪ್ರಶಾಂತ್ ರೈ ಮರುವಂಜ ಇವರ ನೇತೃತ್ವದಲ್ಲಿ ವಿಷ್ಣು ಗ್ರೂಪ್ಸ್ ನ ಯುವಕರ ತಂಡ ಸೆ. 8ರಂದು ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು.


ಶ್ರಮದಾನದಲ್ಲಿ ವಿಷ್ಣು ಗ್ರೂಪ್‌ ನ ಮಾಲಕರಾದ ಪ್ರಶಾಂತ್ ರೈ ಮರುವಂಜ, ಪವನ್ ರೈ ಮರುವಂಜ, ಸುನಿಲ್, ಸುಜಿತ್ ಬಾಳಿಲ, ಬಾಲಕೃಷ್ಣ ಮರುವಂಜ, ವೀರೇಶ್ ಮರುವಂಜ, ಕಿಶೋರ ಮರುವಂಜ, ನಿಖಿಲ್ ಮರುವಂಜ, ಪ್ರಸಾದ್ ಮರುವಂಜ, ದಿವ್ಯ ಮತ್ತಿತರರು ಭಾಗವಹಿಸಿದ್ದರು.