ಅಡ್ಕಾರ್ ಇಲೆಕ್ಟ್ರಾನಿಕ್ಸ್; ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ- ವಾರದ ವಿಜೇತರ ಆಯ್ಕೆ

0

ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ಪಾದಾರ್ಪಣೆ ಪ್ರಯುಕ್ತ ವಾರ್ಷಿಕ ಅಡ್ಕಾರ್ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ವಿಜೇತರ ಆಯ್ಕೆ ಇಂದು ಸಂಜೆ ನಡೆಯಿತು.ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಹರೀಶ್ ಬಂಟ್ವಾಳ್ ಆಯ್ಕೆ ನಡೆಸಿಕೊಟ್ಟರು. ಪ್ರಥಮ ಬಹುಮಾನ ಮಿಕ್ಸರ್ ಗ್ರೈಂಡರನ್ನು ಅನಿತಾ ಸಿ.ಆರ್.ಸುಳ್ಯ, ದ್ವಿತೀಯ ಬಹುಮಾನ ಕುಕ್ಕರ್ ನ್ನು ವಿನಯ್ ಎರ್ಮೆಕ್ಕಾರ್ ಜಾಲ್ಸೂರು, ತೃತೀಯ ಬಹುಮಾನ ಕೆಟಲ್ ನ್ನು ಶಾಝಿಲ್ ಕೊಯಿನಾಡು ವಿಜೇತರಾದರು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್ ಮತ್ತು ಶ್ರೀಮತಿ ಚೈತ್ರ ದಿನೇಶ್ ಹಾಗೂ ಸಿಬ್ಬಂದಿಗಳು, ಸುದ್ದಿ ಬಳಗದ ಯಶ್ವಿತ್ ಕಾಳಂಮನೆ, ರಮೇಶ್ ನೀರಬಿದಿರೆ, ಶ್ರೀಧರ್ ಕಜೆಗದ್ದೆ, ಶಿವಪ್ರಸಾದ್ ಕೇರ್ಪಳ, ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.