ಸುಳ್ಯ ಸಿಟಿ ಜೇಸಿಐ ಸಪ್ತಾಹ

0

ಜೇಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ನಡೆಯುತಿರುವ ಜೇಸಿ ಸಪ್ತಾಹ ಕಾರ್ಯಕ್ರಮದ ಎರಡನೆಯ ದಿನ ಸೆ.10ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರಿನಲ್ಲಿ ಮಾದಕ ವ್ಯಸನಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೆಳ್ಳಾರೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಈರಯ್ಯ ದೊಂತೂರು ಎನ್.ಡಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಗವಹಿಸಿದರು. ವೇದಿಕೆಯಲ್ಲಿ ಕಾಲೇಜು ಆಂತರಿಕ ಗುಣಮಟ್ಟ ಮತ್ತು ಭರವಶಾ ಕೋಶದ ಸಂಚಾಲಕರಾದ ಸ್ವಾಮಿ, ಉಪನ್ಯಾಸಕರಾದ ಜೇಸಿ ರಂಜಿತ್ ಪಿ.ಜೆ, ಜೇಸಿ ಸಪ್ಥಾಹ ನಿರ್ದೇಶಕಿ ಜೇಸಿ ಅನಿತಾ ಪಾನತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶಂಕರ ಭಟ್ ಸಭಾದ್ಯಕ್ಷತೆಯನ್ನು ವಹಿಸಿದ್ದರು.

ಉಪನ್ಯಾಸಕರಾದ ಜೇಸಿ ಮನಮೋಹನ ಬಳ್ಳಡ್ಕ, ಮಹಾಂತೇಶ್ ಹಾಗೂ ಬೆಳ್ಳಾರೆ ಪೊಲೀಸ್ ಠಾಣ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎನ್.ಎಸ್.ಎಸ್, ರೆಡ್ ಕ್ರಾಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾಹಿತಿಯ ಪ್ರಯೋಜನ ಪಡೆದರು.